Friday, May 27, 2011

Vachana 41 - kAyakadalli nirutanAdoDe - The Lord is within the realm of blissful work

ಕಾಯಕದಲ್ಲಿ ನಿರುತನಾದೊಡೆ ಗುರುದರ್ಶನವಾದಡೂ ಮರೆಯಬೇಕು
 ಲಿಂಗ ಪೂಜೆಯಾದಡೂ ಮರೆಯಬೇಕು
ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು

TRANSLITERATION

kAyakadalli nirutanAdoDe gurudarSanavAdaDU mareyabEku
liMga pUjeyAdaDU mareyabEku
jaMgama muMdiddaDU haMgu hariyabEku
kAyakavE kailAsavAdakAraNa
amarESvara liMgavAyittAdaDU kAyakadoLagu

CLICK HERE TO HEAR IT:
http://www.youtube.com/watch?v=8ASfCu4Uh38

TRANSLATION

kAyakadalli (in blissful work) nirutanAdoDe(if immersed) gurudarSanavAdaDU(even if Guru appears) mareyabEku(should forget, don’t acknowledge)
liMga (Linga) pUjeyAdaDU(if worshipping) mareyabEku(should forget, don’t acknowledge)
jaMgama muMdiddaDU (even if Jangama appears before you) haMgu(obligation) hariyabEku (don’t feel)
kAyakavE kailAsavAdakAraNa (since work is auspicious, bliss)
amarESvara liMgavAyittAdaDU (even Lord Amareshvara Linga ) kAyakadoLagu (comes within realm of blissful work)

When immersed in blissful work,
even if Guru appears, ignore him,
ignore worshipping Linga too,
don’t feel obligated to serve even if JaMgama appears before you.
Since work is bliss,
Even Lord Amareshvara Linga comes within the realm of blissful work!

 
COMMENTARY

Shiva Sharanas believed that “kAyakavE kailAsa”. “kAyaka” is work or duty, and “kailAsa” is the abode of Lord Shiva. The goal of all devotees is to reach the abode of Shiva, which is blissful and hence is equivalent to so called “heaven”. As such, the above phrase is translated as “work is heaven” meaning that through pure, unselfish work we can create the heaven here on Earth. The previous posting (Vachana 40) considered work as worshipping of Guru and Linga, and advocated the fruits of work be utilized in dAsOha (dAsa = servant; ha or hum = I) or serving Jangamas (wandering devotees who have dedicated their lives to lift fellow beings to Godliness) and the community. In this sense this phrase is also translated as “work is worship”. Nevertheless, the message is that we should perform our work with utmost devotion for the welfare of the Universe.
In this Vachana, Sharana Aydakki Marayya takes the importance of blissful work to the next level saying that Guru, Linga and Jangama should all be ignored when one is immersed in it. He says that even Lord Amareshvara Linga (Shiva) comes within the realm of blissful work. Amareshvara Linga is the signature of Aydakki Marayya, in all his Vachanas.

Shiva Sharanas cultivated a very high respect for labor. They believed in performing their trades with utmost devotion with the feeling that they are serving the Lord through their work. They did not stop at meeting the needs of the family with the fruits of their work. They minimized their needs to enable distribution of what they earned for the benefit of the fellow beings. The message then is that we should be the best in our careers, be indebted to the Lord for the opportunities provided to us and devote our work to Him. We should meet the minimized needs of the Family through our careers and share our wealth for the benefit of the community. That is how we can bring the heaven to Earth.
Let us follow Career – Family – Community progression through utmost devotion!

KANNADA COMMENTARY

ಇದು ಆಯ್ದಕ್ಕಿಮಾರಯ್ಯನವರ ವಚನ. ಅವರು ಕಾಯಕಕ್ಕೆ ಕೊಟ್ಟ ಮಹತ್ವ ಅದ್ಭುತವಾದದ್ದು. ಎಲ್ಲ ಕಾಲದಲ್ಲಿಯೂ ಎಲ್ಲರಿಗೂ ಆದರ್ಶಪ್ರಾಯವಾದದ್ದು. ಅವರು ಹೇಳುತ್ತಾರೆ: ಕಾಯಕದಲ್ಲಿ ಮಗ್ನರಾದಾಗ ಗುರುದರ್ಶನವನ್ನಾದರೂ ಮರೆಯಬೇಕು. ಲಿಂಗಪೂಜೆಯಾದರೂ ಮರೆಯಬೇಕು, ಜಂಗಮನು ಬಂದು ಮುಂದೆ ನಿಂತರೂ ಆತನ ಹಂಗಿಗೆ ಒಳಗಾಗದೆ ಕಾಯಕವನ್ನು ಮುಂದುವರೆಸಬೇಕು. ಏಕೆಂದರೆ ಕಾಯಕವೇ ಕೈಲಾಸ. ಆದ ಕಾರಣ ಮೇಲೆ ಹೇಳಿದ ಗುರು ಲಿಂಗ ಜಂಗಮ ಎಲ್ಲರೂ ಆ ಕಾಯಕದ ಪರಿಧಿಯ ಒಳಗೇ ಬರುತ್ತಾರೆ.

ಕಾಯಕವೇ ಕೈಲಾಸ ಎಂದು ಶರಣರು ಹೇಳಿದುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಒಳಿತು. ಸರಳವಾಗಿ ಹೇಳಬೇಕೆಂದರೆ ಕಾಯಕವೆಂದರೆ ಕೆಲಸ. ಅದು ಯಾವ ಕೆಲಸ ವಾದರೂ ಆಗಬಹುದು. ಕೆಲಸದಲ್ಲಿ ಮೇಲು ಕೀಳೆಂಬುದಿಲ್ಲ. ಶರಣರು ಚಪ್ಪಲಿ ಹೊಲಿಯುವ ಕೆಲಸದಿಂದ ಹಿಡಿದು ಮಂತ್ರಿಯ ಕೆಲಸದವರೆಗು ಎಲ್ಲ ರೀತಿಯ ಕೆಲಸಗಳನ್ನು ಅತ್ಯಂತ ಪವಿತ್ರ ಭಾವನೆಯಿಂದ ಮಾಡಿ ಕೆಲಸಕ್ಕೆ ಉದಾತ್ತತೆಯನ್ನು ತಂದುಕೊಟ್ಟಿದ್ದಾರೆ. ಕೆಲಸ ಉದಾತ್ತವಾದ ಕಾಯಕವಾಗುವುದು ಹೇಗೆ? ಕೇವಲ ತನ್ನ ಅಥವಾ ತನ್ನ ಹೆಂಡತಿ ಮಕ್ಕಳ ಹೊಟ್ಟೆಪಾಡಿಗಾಗಿ ಮಾಡುವ ಕೆಲಸ ಕಾಯಕವೆನಿಸದು. ಏಕೆಂದರೆ ಅದರಲ್ಲಿ ಸ್ವಾರ್ಥ ಭಾವನೆಯಿರುತ್ತದೆ. ತಾನು ಈ ವಿಶ್ವದ ಒಂದು ಅಂಶ, ವಿಶ್ವ ಬಿಟ್ಟು ತಾನು ಬೇರೆಯಲ್ಲ. ಆದ್ದರಿಂದ ತನ್ನ ದುಡಿತದ ಫಲ ವಿಶ್ವಕ್ಕಾಗಿಯೂ ವಿನಿಯೋಗವಾಗಬೇಕು ಎಂಬ ಉದಾತ್ತ ಭಾವನೆಯಿಂದ ದಾಸೋಹ ಮಾಡುವುದರ ಮೂಲಕ ಸಾಮಾನ್ಯವಾದ ಕೆಲಸವನ್ನು ಉದಾತ್ತವಾದ ಕಾಯಕದ ಎತ್ತರಕ್ಕೇರಿಸಿದರು ಶರಣರು. ಆದ್ದರಿಂದ ಯಾವದೇ ಕೆಲಸ, ಮೋಸ, ವಂಚನೆಯಿಲ್ಲದೆ, ನಿಸ್ವಾರ್ಥ ಭಾವನೆಯಿಂದ ಮಾಡಿ ಅದರ ಫಲವನ್ನು ಜಂಗಮರಿಗಾಗಿ ದಾಸೋಹದಲ್ಲಿ ವ್ಯಯಿಸುವ ವ್ಯಕ್ತಿಯ ಕೆಲಸವು ಕಾಯಕವೆನಿಸಿಕೊಳ್ಳುತ್ತದೆ.

ಇನ್ನು ಕೈಲಾಸವೆಂದರೇನು ಎಂಬುದನ್ನು ನೋಡೋಣ.

ಸಾಮಾನ್ಯವಾಗಿ ನಾವು, “ಕೈಲಾಸ” ವೆಂದರೆ ಸ್ವರ್ಗವೋ, ದೇವಲೋಕವೋ ಎಂದು ತಿಳಿಯುತ್ತೇವೆ. ಆದರೆ ಶರಣರು ಸಾಮಾನ್ಯವಾಗಿ ಪ್ರಚಲಿತವಾದಂತಹ ಅರ್ಥದಲ್ಲಿ ಸ್ವರ್ಗ ಅಥವಾ ದೇವಲೋಕದಲ್ಲಿ ನಂಬಿಕೆ ಇಟ್ಟವರಲ್ಲ. “ಕೈಲಾಸ”ವೆಂದರೆ ಶಿವನ ಧಾಮ. ಶಿವ ಎಂದರೆ ಇಲ್ಲಿ ತ್ರಿಶೂಲಧಾರಿ, ನಾಗಾಭರಣ, ಶಶಿಧರ, ಗಂಗಾಧರ ಇತ್ಯಾದಿ ಆಗಿ ಹಿಮಾಲಯದಲ್ಲಿ ಇರುವಂತಹವನಲ್ಲ. “ಶಿವ” ಎಂದರೆ ಮಂಗಳಕರವಾದದ್ದು, ಯಶಸ್ಸನ್ನು ತಂದು ಕೊಡುವಂತಹದು ಎಂದರ್ಥ. ಹೀಗಾಗಿ ಕಾಯಕವೇ ಕೈಲಾಸ ವೆಂದರೆ ಸ್ವಾರ್ಥ, ಮೋಸ, ವಂಚನೆಯಿಲ್ಲದೆ, ತನ್ನ ದುಡಿತದ ಫಲವು ಜಂಗಮರಿಗೆ ಸೇರಬೇಕು ಎನ್ನುವ ಪವಿತ್ರವಾದ ಭಾವನೆಯಿಂದ ಮಾಡುವ ಕೆಲಸವು ಮಂಗಳಕರವಾದದ್ದು ಎಂದರ್ಥ. ಹೀಗಾಗಿ ಪವಿತ್ರವಾದ, ಮಂಗಳಕರವಾದ ಕಾಯಕ ಮಾಡುವಾಗ ಯಾವ ಅಡ್ಡಿಯೂ ಉಂಟಾಗಬಾರದು. ಗುರು ಲಿಂಗ ಜಂಗಮರಿಂದ ಅದಕ್ಕೆ ಅಡ್ಡಿಯುಂಟಾಗುವ ಹಾಗಿದ್ದರೆ ಅವರನ್ನೂ ಕಡೆಗಣಿಸಬೇಕು ಎನ್ನುತ್ತಾರೆ ಆಯ್ದಕ್ಕಿ ಮಾರಯ್ಯನವರು.

ದಿನ ನಿತ್ಯದ ಬದುಕಿನಲ್ಲಿ ನಾವು ನೋಡುತ್ತೇವೆ: ಯವುದೋ ಕೆಲಸದಲ್ಲಿ ನಿರತರಾದಾಗ ಅತಿಥಿಗಳು ಬರುತ್ತಾರೆ, ಮಾತಿಗೆ ತೊಡಗುತ್ತಾರೆ. ಆಗ ಆ ಕೆಲಸದಲ್ಲಿದ್ದ ಏಕಾಗ್ರತೆಗೆ ಭಂಗ ಬರುತ್ತದೆ. ಕೆಲಸಕೆಟ್ಟುಹೋಗುತ್ತದೆ. ಮಾಡುತ್ತಿರುವ ಒಂದು ಕೆಲಸ ಕೆಟ್ಟು ಹೋದರೆ ಯಾರು ಯಾರಿಗೆ ಎಷ್ಟೆಷ್ಟು ನಶ್ಟವಾಗುತ್ತದೆ ಎನ್ನುವುದನ್ನು ಗಮನಿಸಿ ನೋಡಿದರೆ ಅದರಿಂದ ಆಗುವ ಹಾನಿಯನ್ನು ಮನಗಾಣ ಬಹುದು. ಉದಾಹರಣೆಗೆ ಒಂದೆರಡು ಕೆಲಸಗಳನ್ನು ನೋಡೋಣ: ಮನೆಯ ಕೈತೋಟದ ಕೆಲಸ ಅಥವಾ ಲೇಖನದ ಕೆಲಸದಲ್ಲಿ ತೊಡಗಿ ಕೊಂಡಾಗ ಮಹತ್ವದ ವ್ಯಕ್ತಿ ಬಂದರೆಂದು ಕೊಳ್ಳೋಣ. ಅವರನ್ನು ಉಪಚರಿಸಲು ನಾವು, ತೊಡಗಿಕೊಂಡ ಕೆಲಸವನ್ನು ಬಿಟ್ಟು ಹೋಗುತ್ತೇವೆ ಎಂತಿಟ್ಟುಕೊಳ್ಳೋಣ. ಆಗ ಕೈತೋಟದ ಕೆಲಸ ಮತ್ತು ಲೇಖನದ ಕೆಲಸಕ್ಕೆ ಏನಾಗುತ್ತದೆ? ತೋಟದ ಸಸಿಗಳಲ್ಲಿರುವ ಬಾಡಿದ ಎಲೆಗಳನ್ನು ತೆಗೆಯುವುದು, ಕಳೆ ಕೀಳುವುದು, ಗೊಬ್ಬರ ಹಾಕುವುದು, ನೀರುಣಿಸಿವುದು ಇತ್ಯಾದಿ ಕೆಲಸದಲ್ಲಿ ಮನಸ್ಸು ತೊಡಗಿಕೊಂಡಿರುತ್ತದೆ. ಲೇಖನದ ಕೆಲಸದಲ್ಲಿದ್ದಾಗ, ಲೇಖಕನ ಮನಸ್ಸು, ಆಯ್ಕೆ ಮಾಡಿದ ವಿಷಯದಬಗ್ಗೆ ಯೋಚಿಸುವುದರಲ್ಲಿ, ಅದನ್ನು ಯಾವ ಯಾವ ಕ್ರಮದಲ್ಲಿ ಬರೆಯಬೇಕು, ಯಾವ ಶೈಲಿಯಲ್ಲಿ ಅಭಿವ್ಯಕ್ತಿಸಬೇಕು, ಯಾವ ರೀತಿಯ ಪದಗಳನ್ನು ಬಳಸಬೇಕೆಂಬ ನಾನಾ ವಿಷಯಗಳಲ್ಲಿ ಲೇಖಕನಿಗೆ ತಿಳಿಯದಂತೆಯೇ ತೊಡಗಿಕೊಂಡಿರುತ್ತದೆ. ಅತಿಥಿಗಳಿಗಾಗಿ ಅದನ್ನು ಅರ್ಧದಲ್ಲಿ ಬಿಟ್ಟು ಹೋದಾಗ ಈ ಎಲ್ಲ ಏಕಾಗ್ರತೆ ಗೆ ಭಂಗ ಬರುತ್ತದೆ. ಕೆಲ ಹೊತ್ತಿನ ನಂತರ ಮತ್ತೆ ಹಿಂದಿರುಗಿ ಬಂದು, ಬಿಟ್ಟ ಕೆಲಸವನ್ನು ಕೈಗೊಂಡಾಗ ಆ ಮೊದಲಿನ ಏಕಾಗ್ರತೆಗೆ ಭಂಗ ಬಂದು ಕೆಲಸದ ನಿರಂತರ ಪ್ರವಾಹಕ್ಕೆ ಧಕ್ಕೆ ಉಂಟಾಗುತ್ತದೆ. ಮನಸ್ಸು ಬೇರೆ ವಿಷಯದಲ್ಲಿ ವಿಹರಿಸತೊಡಗುತ್ತದೆ ಇಲ್ಲವೆ, ಕೆಲಸ ಸರಿಯಾಗಿ ಮಾಡಲಾಗಲಿಲ್ಲವೆಂದು ವ್ಯಗ್ರವಾಗುತ್ತದೆ, ಸಮಯ ನಷ್ಟವಾಗುತ್ತದೆ, ಕೆಲಸಕ್ಕೂ ಹಾನಿಯುಂಟಾಗುತ್ತದೆ, ಈ ಎಲ್ಲದರ ಪರಿಣಾಮ, ತೋಟದ ಕೆಲಸದ ಸಂಬಂಧದಲ್ಲಿ, ಕೆಲಸ ಮಾಡುವ ವ್ಯಕ್ತಿಯ ಮೇಲೂ, ಸಸಿಗಳ ಮೇಲೂ, ಪರಿಸರದ ಮೇಲೂ, ಲೇಖನದ ವಿಷಯದಲ್ಲಿ ಲೇಖನದ ಮೇಲೂ ಆ ಮುಖಾಂತರ ಓದುಗರ ಮೇಲೂ, ಆಯಾ ಕೆಲಸಕ್ಕೆ ಸಂಬಂಧಪಟ್ಟ ಪರಿಸರದ ಮೇಲೂ ಉಂಟಾಗುತ್ತದೆ. ಅಪರೋಕ್ಷವಾಗಿ ಇದರ ಪರಿಣಾಮ ಇಡೀ ಸಮಾಜದ ಮೇಲೆ ಆಗುತ್ತದೆ. ಆಂಶಿಕವಾಗಿಯಾದರೂ, ಬ್ರಹ್ಮಾಂಡದ ಮೇಲೂ ಅದರ ಪರಿಣಾಮವಾಗುತ್ತದೆ. ಅಂದರೆ ಬ್ರಹ್ಮಾಂಡ ಮತ್ತು ಲಿಂಗಾಂಗವೂ ಅದರ ಪರಿಣಾಮದ ವ್ಯಾಪ್ತಿಯಲ್ಲಿ ಬರುತ್ತವೆ ಎಂದಾಯಿತು. ಇದನ್ನುಳಿದು ಬೇರೆ ಇನ್ನಾವ ಗುರು ಲಿಂಗ ಜಂಗಮರು ಇರಲು ಸಾಧ್ಯ? ಅದಕ್ಕಾಗಿಯೇ ಆಯ್ದಕ್ಕಿ ಮಾರಯ್ಯನವರು, ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗೆ ಎಂದು ಹೇಳುತ್ತಾರೆ. ಲಿಂಗ ಮತ್ತು ಕಾಯಕ ಎರಡನ್ನೂ ಒಂದೇ ಅಥವಾ ಕಾಯಕದಲ್ಲಿಯೇ ಲಿಂಗವಿದೆ ಎಂದ ಅವರ ಕಾಣ್ಕೆಗೆ ಸರಿಸಾಟಿಯಿಲ್ಲ.

ಮೇಲೆ ಹೇಳಿರುವುದು ಒಂದು ಸಾಮಾನ್ಯವಾದ ಚಿಕ್ಕ ಉದಾಹರಣೆ. ಇದು ಎಲ್ಲ ಕೆಲಸಕ್ಕೂ ಅನ್ವಯವಾಗುತ್ತದೆ. ನಾವು ಗುರುತರವಾದ ಹೊಣೆಗಳನ್ನು ವಹಿಸಿಕೊಂಡಂತೆ ಅವುಗಳಿಗೆ ಭಂಗ ಉಂಟಾದಾಗ ಆಗುವ ಪರಿಣಾಮವೂ ಗುರುತರವಾಗಿರುತ್ತದೆ. ಇಂತಹ ಸೂಕ್ಷ್ಮಗಳನ್ನೆಲ್ಲ ಮನಗಂಡಿದ್ದರು ಶರಣರು. ಅದಕ್ಕೇ ಕಾಯಕದಲ್ಲಿ ನಿರತನಾದೊಡೆ ಗುರು,ಲಿಂಗ, ಜಂಗಮರ ಹಂಗು ತೊರೆಯಬೇಕು ಎಂದು ಹೇಳುತ್ತಾರೆ.

ಒಂದು ಸಣ್ಣ ಕೆಲಸದ ಪರಿಣಾಮ ಇಡೀ ವಿಶ್ವದ ಮೇಲೆ ಆಗುತ್ತದೆ ಎಂದರೆ ಅನೇಕರು ನಂಬದೆ ಇರಬಹುದು. ಆದರೆ ಇಂದಿನ ವಿಜ್ಞಾನವೂ ಕೂಡ ಅದನ್ನು ಹೇಳುತ್ತದೆ. ಹಿಮಾಲಯದ ಪರ್ವತ ಭಾಗದಲ್ಲಿ ಭೂಕಂಪವಾದರೆ ನಾರ್ವೆಯ ಶಾಂತ ಕೆರೆಯು ಪ್ರಕ್ಷುಬ್ಢಗೊಳ್ಳುತ್ತದೆ. ಈ ರೀತಿಯ ನಾನಾ ಉದಾಹರಣೆಗಳನ್ನು ಕೊಡಬಹುದು. ಅಂತರ್ಜಾಲ ಇತರ ಆಧುನಿಕ ತಂತ್ರಜ್ಞಾನದಿಂದ ಹಾಗೂ ಕೆಲವರು ಅದರದೇ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದರಿಂದ ಅದನ್ನು ಗುರುತಿಸಲು ಸಾಧ್ಯವಾಗಿದೆ. ಸ್ಥೂಲ ಜಗತ್ತಿನಲ್ಲಿ ಒಂದು ಪ್ರಾಕೃತಿಕ ಘಟನೆಯ ಪರಿಣಾಮ ಸಾವಿರಾರು ಮೈಲಿ ದೂರದಲ್ಲಿ ಕಂಡು ಬರುವಂತಿದ್ದಾಗ, ಸೂಕ್ಷ್ಮಜಗತ್ತಿನಲ್ಲಿಯೂ ಕೂಡ ಅದು ನಡೆಯಲೇ ಬೇಕು. ಅದನ್ನು ಗುರುತಿಸಲು ನಮ್ಮ ದೃಷ್ಟಿಯೂ ಅಷ್ಟೇ ಸೂಕ್ಷ್ಮವಾಗಿರಬೇಕು. ಉಪನಿಷತ್ತಿನ ದೃಷ್ಟಾರರು, ಶರಣರು ಇದನ್ನು ತಮ್ಮ ಅನುಭಾವದಿಂದ ಕಂಡುಕೊಂಡಿದ್ದರು. ಅವರ ಸೂಕ್ಷ್ಮ ದೃಷ್ಟಿಯನ್ನು ಮೆಚ್ಚಲೇ ಬೇಕು. ಕಾಯಕವನ್ನು ಗುರು, ಲಿಂಗ, ಜಂಗಮರಿಗಿಂತ ಮೇಲಿನ ಸ್ಥಾನದಲ್ಲಿ ಇಟ್ಟ ಅವರ ಸಾಮಾಜಿಕ ಕಳಕಳಿಯನ್ನು, ಕಾಯಕದ ಬಗ್ಗೆ ಅವರಿಗಿದ್ದ ಪೂಜ್ಯ ಭಾವನೆಯನ್ನು ಪೂರ್ತಿಯಾಗಿ ಪದಗಳಲ್ಲಿ ವ್ಯಕ್ತಗೊಳಿಸಲು ಸಾಧ್ಯವೆ? ಅವರ ಅಂತರಂಗವನ್ನು ಹೊಕ್ಕು ಕಾಯಕದ ಮಹತ್ವ ವನ್ನು ಅರಿಯುವ ಸಾಮರ್ಥ್ಯ ( ಶಾಂತ ಮನಸ್ಸು) ಮತ್ತು ಆಸಕ್ತಿ ನಮಗಿದೆಯೆ

ಅದನ್ನು ಅರಿಯಲು ಆಯ್ದಕ್ಕಿ ಮಾರಯ್ಯ ಮತ್ತು ಅವರ ಪತ್ನಿ ಲಕ್ಕಮ್ಮನ ಬಗ್ಗೆ ತಿಳಿಯುವುದು ಒಳ್ಳೆಯದು. ಅದಕ್ಕೆ ಮುಂದಿನ ವಚನವನ್ನು ನೋಡೋಣ.





2 comments:

  1. Dr. Chandra Mouli submitted the following comments on May 29th, 2011:

    Hi Mr.Sajjan Shiva,
    I want to receive the vachana translation of the week regularly. I want to thank you for Emailing it to me. It is really very good. I am happy you are doing this to our community.
    Sharanu
    Chandra Mouli

    ReplyDelete
  2. Vimala Paran submitted the following comments on May 27th, 2011:

    Hi,

    I like your writings on vachanas on VSNA FB. very thoughtful.
    Regards
    Vimala

    ReplyDelete