Friday, May 18, 2012

Vachana 90: Tanuva Gelalariyade - Body, Mind and Wealth



ತನುವ ಗೆಲಲರಿಯದೆ, ಮನವ ಗೆಲಲರಿಯದೆ
ಧನವ ಗೆಲಲರಿಯದೆ, ಭ್ರಮೆಗೊಂಡಿತ್ತು ಲೋಕವೆಲ್ಲವು,
ತನುವ ದಾಸೋಹಕೆ ಸವೆಸಿ, ಮನವ ಲಿಂಗ ಧ್ಯಾನದಲ್ಲಿ ಸವೆಸಿ,
ಧನವ ಜಂಗಮದಲ್ಲಿ ಸವೆಸಿ ಗೆಲ್ಲಬಲ್ಲಡೆ
ಸಂಗನ ಬಸವಣ್ಣನಲ್ಲದೆ ಮತ್ತಾರನೂ ಕಾಣೆ ಗುಹೇಶ್ವರಾ-
ನಿಮ್ಮ ಶರನಣ ಸಂಗನ ಬಸವಣ್ಣಂಗೆ ನಮೋ ನಮೋ ಎನುತಿರ್ದೆನು

 
TRANSLITERATION

Tanuva gelalariyade, manava gelalariyade
Dhanava gelalariyade, bhramegoMDittu lOkavellavu,
Tanuva daasOhake savesi, manava liMga dhyaanadalli savesi,
Dhanava jaMgamadalli savesi gellaballaDe
saMgana basavaNNanallade mattaaranU kaaNe guhEshvaraa-
nimma sharanaNa saMgana basavaNNaMge namO namO enutirdenu


CLICK HERE TO READ-ALONG:

http://youtu.be/txpl8yP31sY


TRANSLATION (WORDS)

Tanuva (the body) gelalariyade,(not knowing to conquer) manava (the mind) gelalariyade (not knowing to conquer)
Dhanava (the wealth) gelalariyade,( not knowing to conquer) bhramegoMDittu (is illusioned) lOkavellavu,(the whole world)
Tanuva (the body) daasOhake(for daasoha) savesi,(used, engaging in service) manava (mind) liMga (the god) dhyaanadalli (in meditation) savesi, (engaging in)
Dhanava (wealth) jaMgamadalli ( towards jangama) savesi (engaging in service) gellaballaDe (to know to conquer)
saMgana basavaNNanallade (other than sangana Basavanna) mattaaranU(no one else) kaaNe (I don’t see)
guhEshvaraa-(Guheshvara) nimma (your)sharanaNa saMgana basavaNNaMge (to devotee basavanna)
namO namO enutirdenu (I bow to him)


TRANSLATION

Not knowing how to conquer the body, not knowing how to conquer the mind, and not knowing how to conquer the wealth, the whole world is under illusion!
Conquering the body by engaging it in service (Daasoha), Conquering the mind by engaging it in meditation upon the God (Linga), and Conquering the wealth by dedicating it to wandering ascetics (Jangamas), is only accomplished by Basavanna of Sangama – I don’t know anyone else, Oh Guhesvara!
I bow to your devotee Basavanna of Sangama!


COMMENTARY

In this Vachana, Allama Prabhu provides a guide to how best we should utilize the three prime resources we are all endowed with: Body, Mind and Wealth. He says that the world is under illusion by not knowing how to conquer these entities. The body should be engaged in service of the fellow beings around us (Daasoha). The mind must be immersed in meditation to merge with the divine and the wealth should be utilized in supporting the activities of realized souls (Jangamas) dedicated to bringing awareness to the community. Allama prabhu says that Basavanna is the only individual he has come across who has conquered all the three resources. He shows his utmost respect and admiration of Basavanna by saying ‘I bow to your devotee Basavanna, Oh Guhesvara’.

We have said that the body is the temple and it should be kept fit for God to reside in it. We exercise and eat right to keep the body fit and healthy. Indeed, we spend so much time and resources to take care of the body that we become servants of the body rather than the body being at our service. It is not sufficient that the body serves our needs, but it should be dedicated to the service of the community around us.

We have said that the mind is a monkey and its natural state is that of wandering around. We have to control our minds. We have to evaluate our wants and needs and minimize our desires. Meditating upon the divine and constant awareness of the divine within and around us is a must. We should be the masters of our mind and not vice versa.
Honest, unselfish work and devotion to profession is a must to earn an honest living. Indeed, it is a must to take care of the needs of the family. Beyond that, the wealth should be dedicated to support the activities that make the society better.
In summary, Allama Prabhu is advocating us to become masters of our body, mind and wealth and use them appropriately, rather than being their servants.


Let us conquer body, mind and wealth!


KANNADA COMMENTARY

ತನು, ಮನ, ಧನಗಳನ್ನು ಹೇಗೆ ಸವೆಸಬೇಕು ಎನ್ನುವುದಕ್ಕೆ ಈ ವಚನವು ಕೈಪಿಡಿಯಂತಿದೆ. ತನು ಮನವನ್ನು ಗೆಲ್ಲಲ್ಲು ಬರದೆ ಅವುಗಳಿಗೆ ದಾಸರಾಗಿ ಈ ಲೋಕದ ಜನರೆಲ್ಲ ಭ್ರಮೆಗೊಳ್ಳುತ್ತಾರೆ. ದೇಹದ ಬೇಕು ಬೇಡಗಳನ್ನು ಅರಿತುಕೊಂಡು ನಡೆದುಕೊಳ್ಳುವವರು ಅತಿ ವಿರಳ. ತನುವಿನ ಬೇಕು ಬೇಡಗಳನ್ನು ಅರಿತುಕೊಂಡು ನಡೆದರೆ ಅದನ್ನು ಗೆಲ್ಲಬಹುದು. ಎಂದರೆ ಅದು ನಾವು ಹೇಳಿದಂತೆ ಕೇಳುವಂತೆ ಮಾಡಬಹುದು. ಆದರೆ ನಾವೇ ಅದರ ದಾಸರಾಗಿ ಬಿಡುತ್ತೇವೆ. ಅದನ್ನು ಅತಿಯಾದ ಮಮತೆಯಿಂದ ಬೆಳೆಸುತ್ತೇವೆ. ಆಗ ಅದು ನಮ್ಮ ಮಾತು ಕೇಳುವುದಿಲ್ಲ. ಮನಸ್ಸಿನ ಸ್ಥಿತಿಯೂ ಇದೇ ಆಗಿದೆ.


ಮನಸ್ಸನ್ನು ಅದು ಇಷ್ಟ ಪಟ್ಟ ಕಡೆಗೆ ಹೋಗಲು ಬಿಡುತ್ತೇವೆ. ಅದರ ಅವಶ್ಯಕತೆಗಳನ್ನು ಗುರುತಿಸಿ ಅವನ್ನು ಮಾತ್ರ ಪೂರ್ತಿಗೊಳಿಸದೆ, ಅದರ ಆಸೆಗಳನ್ನು ಒಳ್ಳೆಯದು ಕೆಟ್ಟದ್ದು ಎಂದು ವಿಮರ್ಶಿಸದೆ ಅದು ಬಯಸಿದುದನೆಲ್ಲ ಒದಗಿಸಿಕೊಟ್ಟು, ಅದನ್ನು ಕೆಡಿಸಿಬಿಡುತ್ತೇವೆ. ಕೊನೆಯಲ್ಲಿ ಅದರ ದಾಸರಾಗುತ್ತೇವೆ. ಧನವು ಕೂಡ ನಮ್ಮನ್ನು ತನ್ನ ದಾಸನಾಗಿ ಮಾಡಿಕೊಂಡಿದೆ. ಏಕೆಂದರೆ ಅದರ ಬಗ್ಗೆ ಅತಿಯಾದ ಮೋಹದಿಂದ ನಾವು ಅದಕ್ಕೆ ಸಲ್ಲಬೇಕಾದ ಸ್ಥಾನವನ್ನು ಕೊಡದೆ ಪರಮೋಚ್ಚ ಸ್ಥಾನವನ್ನು ಕೊಡುತ್ತೇವೆ. ಅದನ್ನು ನೆಚ್ಚಿಕೊಂಡು, ಮೆಚ್ಚಿಕೊಂಡು, ಅದನ್ನೇ ಕಚ್ಚಿಕೊಂಡು ಒದ್ದಾಡುತ್ತೇವೆ. ಆದರೆ ಅದು ನಮ್ಮಿಂದ ನುಣುಚಿಕೊಳ್ಳುತ್ತದೆ ಅಥವಾ ನಮಗಿಂತ ಮೇಲೆ ಕುಳಿತುಕೊಂಡು ನಮ್ಮ ಮೇಲೆ ಅಧಿಕಾರ ನಡೆಸುತ್ತದೆ. ಹೀಗಾಗಿ ತನು, ಮನ, ಧನಗಳನ್ನು ಗೆಲ್ಲುವ ಕಲೆಯಿಂದ ನಾವೆಲ್ಲರೂ ವಂಚಿತರಾಗಿದ್ದೇವೆ. ಇದನ್ನು ಕಂಡು ಅಲ್ಲಮರು “ಲೋಕವೆಲ್ಲ ಭ್ರಮೆಗೊಂಡಿದೆ ಎಂದು ಹೇಳುತ್ತಾರೆ”. ತನುವನ್ನು ದಾಸೋಹದಲ್ಲಿ ಸವೆಸುವುದು, ಮನವನ್ನು ಲಿಂಗದಲ್ಲಿ ನಿಲಿಸುವುದು ಮತ್ತು ಧನವನ್ನು ಜಂಗಮಕ್ಕಾಗಿ ಸವೆಸುವುದು ಬಸವಣ್ಣನವರಿಗೆ ಮಾತ್ರ ಸಾಧ್ಯವೆಂದು ಹೇಳುತ್ತಾರೆ.


ದಾಸೋಹವೆಂದರೆ ತನ್ನಲ್ಲಿದ್ದುದನ್ನು ಭಕ್ತರೊಂದಿಗೆ ಹಂಚಿಕೊಳ್ಳುವುದು. ತನಗೆ ಬೇಕು ಎಂತಲೋ ಅಥವಾ ನಾಳೆಗಿರಲಿ ಎಂದೋ ತನ್ನದನ್ನು ಬೇರೆ ಇಡುವುದಲ್ಲ. ತನ್ನಲ್ಲಿರುವುದನ್ನೆಲ್ಲ, ಅದು ತನ್ನದಲ್ಲ, ಅದು ಸಮಾಜದ್ದು, ಎಂದು ನಿರ್ವಂಚನೆಯಿಂದ ಇತರರೊಂದಿಗೆ ಹಂಚಿಕೊಳ್ಳುವುದು. ಅದಕ್ಕಾಗಿ ದೇಹವನ್ನು ಸವೆಸುವುದು, ದುಡಿಯುವುದು. ಮನಸ್ಸನ್ನು ಲಿಂಗದಲ್ಲಿ ನಿಲ್ಲಿಸುವುದು ಎಂದರೆ ಸದಾ ಆ ಪರಮ ತತ್ವವನ್ನು ನೆನೆಯುವುದು. ಸಂಸಾರದ ತಾಪತ್ರಯಗಳಿಂದ ದೂರವಿದ್ದು ಅದರ ಮಾಯಾ ಮೋಹಗಳಿಗೆ ಅಂಟಿಕೊಳ್ಳದೆ ಮನವನ್ನು ಲಿಂಗದ ಧ್ಯಾನದಲ್ಲಿ ತೊಡಗಿಸುವುದು. ಹೀಗೆ ಮಾಡಲು ಮೊದಲು ವ್ಯಕ್ತಿಗೆ ಈ ಸಂಸಾರವು ಹುರುಳಿಲ್ಲದ್ದು, ಅದರಿಂದ ಯಾವ ಪ್ರಯೋಜನವೂ ಇಲ್ಲ, ಅದಕ್ಕೆ ಅಂಟಿಕೊಳ್ಳುವುದರಿಂದ ದುಃಖಕ್ಕೆ ದಾರಿಯಾಗುತ್ತದೆ ಎಂಬುದು ಆಳವಾಗಿ ಮನವರಿಕೆಯಾಗಬೇಕಾಗುತ್ತದೆ. ಹಾಗಾದಾಗ ಮಾತ್ರ ಸಂಸಾರದಿಂದ ಮನಸ್ಸು ವಿಮುಖಗೊಂಡು ಆ ಪರಮತತ್ವದಲ್ಲಿ ನಿಲ್ಲುತ್ತದೆ. ಈ ರೀತಿ ಸಂಸಾರದಿಂದ ಮನಸ್ಸು ವಿಮುಖಗೊಳ್ಳಬೇಕಾದರೆ ಸಂಸಾರವನ್ನು ಬಹಳ ಆಳವಾಗಿ ಯಾವ ಪೂರ್ವಗ್ರಹವಿಲ್ಲದೆ ವೀಕ್ಷಿಸಬೇಕಾಗುತ್ತದೆ. ಈ ಕಲೆ ಅಳವಟ್ಟಮೇಲೆ ವ್ಯಕ್ತಿ ಸಹಜವಾಗಿಯೇ ಅದರಿಂದ ದೂರಸರಿಯುತ್ತಾನೆ ಮತ್ತು ಎಲ್ಲವನ್ನ್ನೂ ಮೀರಿರುವ ತತ್ವದಲ್ಲಿ ಮನಸ್ಸನ್ನು ನೆಲೆಗೊಳಿಸುತ್ತಾನೆ. ತನು ಮನವಾದ ಮೇಲೆ ಧನವನ್ನೂ ಸಹ ಆತನು ಸಾರ್ಥಕವಾಗಿ ವ್ಯಯಿಸುತ್ತಾನೆ. ಜಂಗಮಕ್ಕಾಗಿ ಅದನ್ನು ಮುಡುಪಿಡುತ್ತಾನೆ. ಜಂಗಮವೆಂದರೆ ಬಯಲು ತತ್ವ, ದೇಹ ಪ್ರಾಣ ಮತ್ತು ಮನಸ್ಸಿನ ತತ್ವಗಳನ್ನು ಮೀರಿದವನು. ಇಂತಹ ತತ್ವವನ್ನು ಹೊಂದಿದವನಿಗಾಗಿ, ತನ್ನ ಧನವನ್ನು ವ್ಯಯಿಸುವುದು.ಆ ತತ್ವಕ್ಕಾಗಿ ಧನವನ್ನು ಸವೆಸುವುದು. ಈ ತತ್ವಕ್ಕಾಗಿಯೇ ಅನುಭವ ಮಂಟಪವನ್ನು ಕಟ್ಟಿದರು. ಹೀಗೆ ಬಸವಣ್ಣನವರು ತಮ್ಮ ತನು ಮನ ಮತ್ತು ಧನವನ್ನು ಉದಾತ್ತ ವಿಚಾರಗಳಿಗೆ ಕೊಟ್ಟು ಶ್ರೇಷ್ಠಮಟ್ಟದ ವ್ಯಕ್ತಿಗಳಾಗಿ ಅಲ್ಲಮಪ್ರಭು ಗಳಿಂದಲೂ ಪೂಜಿತರಾದರು.


Friday, May 11, 2012

Vachana 89: Tanuva Tontavamaadi - Nurturing the Body-Mind Garden


ತನುವ ತೋಂಟವ ಮಾಡಿ, ಮನವ ಗುದ್ದಲಿಯ ಮಾಡಿ, ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ;
ಒಡೆದು ಸಂಸಾರದ ಹೆಂಟೆಯ, ಬಗೆದು ಬಿತ್ತಿದೆನಯ್ಯಾ ಬ್ರಹ್ಮ ಬೀಜವ;
ಅಖಂಡ ಮಂಡಲವೆಂಬ ಬಾವಿ, ಪವನವೇ ರಾಟಾಳ, ಸುಷುಮ್ನ ನಾಳದಿಂದ ಉದಕವ ತಿದ್ದಿ,
ಬಸವಗಳೈವರು ಹಸಗೆಡಿಸಿಹವೆಂದು, ಸಮತೆ ಸೈರಣೆ ಎಂಬ ಬೇಲಿಯನಿಕ್ಕಿ,
ಆವಾಗಲೂ ಈ ತೋಟದಲ್ಲಿ ಜಾಗರವಿದ್ದು, ಸಸಿಯ ಸಲಹಿದೆನುಕಾಣಾ ಗುಹೇಶ್ವರಾ


TRANSLITERATION

Tanuva tOMTava maaDi, manava guddaliya maaDi, Agedu kaLedenayyaa bhraaMtina bEra;
oDedu saMsaarada heMTeya, Bagedu bittidenayyaa brahma bIjava;
aKaMDa maMDalaveMba baavi, pavanavE raaTAALa, suShumna naaLadiMda udakava tiddi,
basavagaLaivaru hasageDisihaveMdu, samate sairaNe eMba bEliyanikki,
aavaagalU I tOTadalli jaagaraviddu, sasiya salahidenu kaaNaa guheshvaraa


CLICK HERE TO READ-ALONG:

http://youtu.be/nN8Qa91ISy4


TRANSLATION (WORDS)

Tanuva (the body) tOMTava (garden) maaDi, ( I made) manava ( the mind) guddaliya (pick axe) maaDi (I made), Agedu ( by digging)` kaLedenayyaa (I got rid of) bhraaMtina (illusion )bEra (the roots of); oDedu (breaking) saMsaarada (worldly) heMTeya ( chunks of mud), Bagedu(after digging,raking) bittidenayyaa ( sowed) brahma bIjava (the seed of Brahma);
aKaMDa (complete, non fragmented) maMDalavu(space, expanse ) eMba (called) baavi (well ), pavanavE (breath alone) raaTAALa ( is pulley), suShumna naaLadiMda ( with the energy channel called sushumna) udakava (water) tiddi ( I irrigated the garden)’
basavagaLaivaru (five bulls) hasageDisihavu (will destroy) eMdu (thinking that), samate (balance, equanimity)sairaNe(tolerance) eMba (called) bEliyanikki,(put the fence of)
aavaagalU (all the time) I (this) tOTadalli (in garden) jaagaraviddu (being awake),
sasiya (of plant) salahidenu (I took care) kaaNaa (you see) guheshvaraa (Guheshvaraa)


TRANSLATION

I made the body a garden and the mind a pick axe,
I dug and got rid of the roots of illusion; I broke the worldly mud chunks and sowed the seeds of Brahma;
From the well of non-fragmented expanse, with breath alone as the pump and from the deoths of sushumna, I irrigated the garden;
Concerned that the five bulls will destroy it, I installed the fence of balance and tolerance;
Being awake all the time, I took care of the sapling, you see Guhesvaraa!


COMMENTARY

In this beautiful Vachana, Allama Prabhu comments on the ingredients needed to implant and enhance the Godliness within us to make the body into a true temple, using the various gardening activities as simile. The body is made into a garden plat (Body is the temple). The mind is made into a pick axe, a tool that helps digging. The characteristic of the mind is to always ‘dig’, dig the past, dig the present and dig (worry about) the future. Allama Prabhu uses this mind pick axe to dig and get rid of the roots of illusion. For a garden to flourish, the soil has to be free of knots. Allama Prabhu compares the worldly activities to the knots (chunks) of mud that need to be broken. Indeed, our worldly activities tie our lives into knots that keep us bound. We need to untie those knots. Into this tended soil, the seed of Brahma (profound knowledge, awareness) is sown. The word ‘bagedu’ has two meanings: digging or raking, and learning. Allama Prabhu is emphasizing that he learnt all about the seed of Brahma (the divine) before planting it; he did not just dig the soil and plant the seed. We need learn to all about the seed and make sure it is the right kind, to get the right crop. Once the seeds are sown, it is time to irrigate them. The source for this irrigation is the well of the whole expanse (Universe). Allama Prabhu uses the channel of Sushumna to fetch the water from the deep well. Sushumna is the channel of energy flow in the (subtle) body that starts at the lowest and ends at the highest Chakra (nerve/ energy bundle) locations. Essentially, Allama Prabhu is invoking the deepest energy source in the body and carries this energy through the body to soak the seeds just sown. This is the concept of awakening the Kundalini Shakti (power/energy). Farmers use a mechanism called ‘Etha’ or ‘raataala’ (in Kannada) to fetch the water from wells. The farmer moves the Eetha down (collecting water from the well) and up (bringing up and releasing the water into the garden). Allama Prabhu uses ‘breath’ as Etha. The up/down motion of Etha is compared to inhale/exhale aspects of breath. As the seeds sprout, Allama Prabhu is concerned that the five bulls (referring to the five senses) might destroy the garden. As such, he builds a fence around the garden with balance (equality) and tolerance as the components. In addition, he is staying awake all the time to make sure that the garden flourishes, meaning that it is a must for us to be aware and awake for the divine knowledge in us to sprout and flourish – just planting it is not sufficient. The Vachana is thus a complete guide to self-realization!


Let us grow the garden of self-realization!

KANNADA COMMENTARY



ಈ ವಚನವನ್ನು ಅಲ್ಲಮರು,  ಬಾಹ್ಯ ತೋಟ ಮಾಡುವ ಕಲೆಯಲ್ಲಿ ನಿಷ್ಣಾತನಾದ ಹಾಗೂ ಅದನ್ನೇ ಸರ್ವ ಶ್ರೇಷ್ಠವೆಂದು ತಿಳಿದು ಅದರಲ್ಲಿಯೇ ಮುಳುಗಿ ಹೋದ ಗೊಗ್ಗಯ್ಯನಿಗೆ, ತಾವು ಮಾಡಿದ ತೋಟದ ಬಗೆಯನ್ನು ವರ್ಣಿಸುವ ಮೂಲಕ, ಅಂತರಂಗದ ಸೂಕ್ಷ್ಮವಾದ ಈ ತೋಟ ಎಲ್ಲದಕ್ಕಿಂತಲೂ ಮುಖ್ಯವಾದದ್ದು ಹಾಗೂ ಶ್ರೇಷ್ಠವಾದದ್ದು  ಎಂದು ಪರೋಕ್ಷವಾಗಿ ಹೇಳುವ ವಚನ.  .  ಅಂತರಂಗದ ತೋಟವನ್ನು ಅವರು ಮಾಡಿದ ರೀತಿ:  ದೇಹವೇ ಒಂದು ತೋಟ, ಆ ತೋಟದ ನೆಲವನ್ನು ಮನವೆಂಬ ಗುದ್ದಲಿಯಿಂದ ಅಗೆದಿದ್ದಾರೆ. ಗುದ್ದಲಿಯಿಲ್ಲದೆ ನೆಲ ಅಗೆಯುವುದು ಬಲು ಕಷ್ಟ. ನೆಲ ಅಗೆಯದೆ ಬಿತ್ತಣಿಗೆ ಮಾಡುವುದು ಸಾಧ್ಯವಿಲ್ಲ. ಅದೇ ರೀತಿ ಮನಸ್ಸೇ ಎಲ್ಲದಕ್ಕೂ ಮೂಲ. ಏನೇ ಮಾಡಿದರೂ ಮನಸ್ಸಿನಿಂದಲೇ ಮಾಡಬೇಕು.ಆದ್ದರಿಂದ ಮನವನ್ನೇ ಗುದ್ದಲಿಯಾಗಿ ಮಾರ್ಪಡಿಸಿದ್ದಾರೆ. ಆ ಮನಸ್ಸೆಂಬ ಗುದ್ದಲಿಯಿಂದ ಮಣ್ಣಿನಲ್ಲಿ ಮನೆಮಾಡಿದ್ದ  ಭ್ರಾಂತಿ ಎಂಬ ಬೇರುಗಳನ್ನು ತೆಗೆದಿದ್ದಾರೆ. ಬೇರೆ ಬೇರುಗಳು ಉಳಿದುಕೊಂಡಿರುವ ಸ್ಥಳದಲ್ಲಿ ಹೊಸ ಸಸಿಗಳು ಬೆಳೆಯುವ ಅವಕಾಶವಿರುವುದಿಲ್ಲ. ಹಾಗೆಯೇ  ನಮ್ಮಲ್ಲಿ ಮನೆಮಾಡಿರುವ ಭ್ರಾಂತಿಯ ಬೇರುಗಳನ್ನು ತೆಗೆಯಬೇಕು. ಭ್ರಾಂತಿಯು ತಪ್ಪು ತಿಳಿವಳಿಕೆಗೆ ದಾರಿ ಮಾಡಿಕೊಡುತ್ತದೆ.  ಆ ಪರಮ ಸತ್ಯದ ಸಾಕ್ಷಾತ್ಕಾರಕ್ಕೆ ಅಡ್ಡಿಮಾಡುತ್ತದೆ. ಭ್ರಾಂತಿ ಎಂಬ ಆ ಹಳೆ ಬೇರುಗಳನ್ನು ಕಿತ್ತೆಸೆಯಲೇ ಬೇಕು.  ಆದರೆ ಅಷ್ಟರಿಂದಲೇ ಕೆಲಸ ನಡೆಯುವುದಿಲ್ಲ. ಬೇರುಗಳನ್ನು ತೆಗೆದ ಮೇಲೆ ಅಲ್ಲಿಯ ಮಣ್ಣಿನ ಹೆಂಟೆಗಳನ್ನು ಒಡೆಯ ಬೇಕು. ಮಣ್ಣಿನ ಕಣಗಳು ಒಂದಕ್ಕೊಂದು ಗಟ್ಟಿಯಾಗಿ ಅಂಟಿಕೊಂಡು  ಹೆಂಟೆಯಾಗಿ,  ಬೆಳೆಗೆ   ಗಾಳಿ ಬೆಳಕು ಸರಿಯಾಗಿ ಪ್ರವೇಶಿಸದಂತೆ ಮಾಡುತ್ತವೆ.  ಆದ್ದರಿಂದ ಅವುಗಳನ್ನು ಒಡೆಯಬೇಕು.  ತನುವೆಂಬ ತೋಟದ ಸಂದರ್ಭದಲ್ಲಿ  ಸಂಸಾರದ ಮೋಹವು ಹೆಂಟೆಯಂತೆ ಅಡ್ಡಿಮಾಡುತ್ತದೆ. ಅದರಿಂದ ಕಳಚಿಕೊಳ್ಳುವುದು ಬಹು ಮುಖ್ಯ.  ಹೀಗೆ ಮಾಡಿದ ಮೇಲೆ  ಮಣ್ಣು ಹದವಾಗುತ್ತದೆ, ಅಂತರಂಗ ಶುದ್ಧವಾಗುತ್ತದೆ, ಬೀಜ ಬಿತ್ತಲು ಯೋಗ್ಯವಾಗುತ್ತದೆ. ಅಲ್ಲಿ ಅಲ್ಲಮರು, ಬ್ರಹ್ಮ ಬೀಜವನ್ನು ಬಿತ್ತುತ್ತಾರೆ. ಇಷ್ಟೆಲ್ಲ ಶ್ರಮ ಪಟ್ಟು ಅಂತಿಂತಹ ಬೀಜ ಬಿತ್ತಿದರೇನು ಫಲ?  ಘನವಾದ ಬೀಜವನ್ನೇ ಬಿತ್ತುತ್ತಾರೆ. ಇನ್ನು ಅದಕ್ಕೆ ನೀರಿನ ಅವಶ್ಯಕತೆಯಿದೆ. ಅವರು ಅದಕ್ಕೆ ನೀರು ಹಾಯಿಸುವ ರೀತಿ ಯೋಗಕ್ಕೆ ಸಂಬಂಧಪಟ್ಟದ್ದು.  ಅಖಂಡ ಮಂಡಲವೆಂಬ ಬಾವಿ, ಎಂದರೆ  ಪರಿಪೂರ್ಣತೆ ಎಂದರ್ಥ. ಬ್ರಹ್ಮ ಬೀಜವು ಪರಿಪೂರ್ಣವಾದದ್ದು. ಅದಕ್ಕೆ ಬೇಕಾದ ಉದಕವು ಪರಿಪೂರ್ಣದಿಂದಲೇ ಬರಬೇಕು. ಆ ಪರಿಪೂರ್ಣದಿಂದಲೇ ಅದಕ್ಕೆ ಪೋಷಕ ತತ್ವ ಬೇಕು. ಪರಿಪೂರ್ಣತೆ ಎಂಬ ಬಾವಿಯಿಂದ ಅಲ್ಲಮರು ಪ್ರಾಣವಾಯುವೆಂಬ ರಾಟಾಳದ ಮೂಲಕ  ನೀರನ್ನು ಹರಿಸುತ್ತಾರೆ.  ಯೋಗ ಶಾಸ್ತ್ರದ ಪ್ರಕಾರ  ಇಡಾ, ಪಿಂಗಳ ಮತ್ತು  ಸುಷುಮ್ನ ಎಂಬ ಮೂರು ಮುಖ್ಯ ನಾಡಿಗಳಿವೆ. ಪ್ರತಿಯೊಬ್ಬ ವ್ಯಕ್ತಿಯು  ಇಡಾ ಮತ್ತು ಪಿಂಗಳ ನಾಡಿಗಳಿಂದ ಉಸಿರಾಡುತ್ತಾನೆ. ಕೆಲವರಲ್ಲಿ ಇಡಾ ನಾಡಿಯೂ , ಇನ್ನು ಕೆಲವರಲ್ಲಿ ಪಿಂಗಳ ನಾಡಿಯು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ.  ಇವೆರಡು ಸಮಾನವಾಗಿ ಕೆಲಸ ಮಾಡಿದಾಗ, ಈ ಎರಡರ ಸಂತುಲನೆಯನ್ನು ಸಾಧಿಸಿದಾಗ, ಈ ಎರಡು ನಾಡಿಗಳ  ಮಧ್ಯೆ ಇರುವ ಸುಷುಮ್ನ ನಾಡಿಯ ಮೂಲಕ ಪ್ರಾಣವಾಯು ಹರಿಯುತ್ತದೆ ಮತ್ತು ವ್ಯಕ್ತಿಯಲ್ಲಿ ಸುಪ್ತವಾಗಿದ್ದ ಕುಂಡಲಿನೀ ಶಕ್ತಿಯು ಎಚ್ಚರಗೊಳ್ಳುತ್ತದೆ. ಕುಂಡಲಿನಿ ಶಕ್ತಿಯು ಬ್ರಹ್ಮ ರಂಧ್ರಕ್ಕೇರಿದಾಗ ವ್ಯಕ್ತಿಯು ಅನಂದ ಸಾಗರದಲ್ಲಿ ಓಲಾಡುತ್ತಾನೆ.  ಕುಂಡಲಿನಿ ಶಕ್ತಿಯು ಬ್ರಹ್ಮ ರಂಧ್ರಕ್ಕೇರಬೇಕು.  ತನುವೆಂಬ ತೋಟದಲ್ಲಿ ಬಿತ್ತಿದ್ದ  ಬ್ರಹ್ಮ ವೆಂಬ  ಬೀಜಕ್ಕೆ ಸಮತೆಯಿಂದ ಸಾಧಿಸಿದ ವಿಶೇಷ ವಾದ ಜಲದ ಅವಶ್ಯಕತೆಯಿದೆ. ಅದನ್ನು ಅಲ್ಲಮರು  ಪ್ರಾಣವಾಯುವಿನ ಸಾಧನೆಯ ಮೂಲಕ ಒದಗಿಸುತ್ತಾರೆ. ಅಲ್ಲಿಗೆ ಮುಗಿಯಿತು ಕೆಲಸವೆಂದು ಸುಮ್ಮನಿರುವ್ದುದು ಸಲ್ಲ. ಏಕೆಂದರೆ ಐದು ಬಸವಗಳು ತೋಟದಲ್ಲಿ ಬೆಳೆದ ಸಸಿಯನ್ನು ತಿನ್ನಲು ಕಾಯುತ್ತಿರುತ್ತವೆ.  ಎಂದರೆ ಐದು ಇಂದ್ರಿಯಗಳು  ಬ್ರಹ್ಮ ಬೀಜವನ್ನು ಬೆಳೆಯಲು ಅಡ್ಡಿಮಾಡುತ್ತವೆ ಎಂದು ಅರ್ಥ.  ಸಮತೆ ಮತ್ತು ಸೈರಣೆ ಎಂಬ ಬೇಲಿಯನ್ನು ಕಟ್ಟಿ, ಆ ಎತ್ತುಗಳು ತೋಟವನ್ನು ಹಾಳುಮಾಡದಂತೆ ನೋಡಿಕೊಳ್ಳುತ್ತಾರೆ. ಇಲ್ಲಿ ಸಮತೆ ಮತ್ತು ಸೈರಣೆ  ಎಂಬ ಪದಗಳು, ಇಂದ್ರಿಯಗಳೊಂದಿಗೆ ಅವರು ನಡೆದುಕೊಳ್ಳುವ ಬಗೆಯನ್ನು ತಿಳಿಸುತ್ತವೆ. ಇಂದ್ರಿಯಗಳನ್ನು ಶಿಕ್ಷಿಸುವುದಾಗಲಿ ಅಥವಾ ತುಳಿದಿಡುವುದಾಗಲಿ ಅವರು ಒಪ್ಪುವುದಿಲ್ಲ. ಸಮತೆ ಮತ್ತು ಸೈರಣೆ, ಎಂದರೆ ಅವುಗಳೊಂದಿಗೆ ಯುಕ್ತವಾಗಿ, ಸಂಯಮದಿಂದ ನಡೆದುಕೊಳ್ಳುವುದು, ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು  ವ್ಯವಹರಿಸುವುದು. ಹಾಗಾದಾಗ ಮಾತ್ರ ಅವುಗಳು ತಮ್ಮ ಸ್ಥಳದಲ್ಲಿ ತಾವಿರುತ್ತವೆ. ಅವುಗಳಿಂದ ತೊಂದರೆಯುಂಟಾಗುವುದಿಲ್ಲ.  ಬ್ರಹ್ಮ ಬೀಜವು ನಿರಾಳತೆಯಿಂದ ಬೆಳೆಯುತ್ತದೆ. ಈ ರೀತಿಯಾದ ಕಾಳಜಿ ವಹಿಸಿ ಅವರು ಸಸಿಯನ್ನು ಬೆಳೆಸಿ ತೋಟವನ್ನು ಮಾಡುತ್ತಾರೆ.

Friday, May 4, 2012

Vachana 88: Eriya Kattabahudallade - Disciple’s Responsibility


ಏರಿಯ ಕಟ್ಟಬಹುದಲ್ಲದೆ, ನೀರ ತುಂಬಬಹುದೆ?
ಕೈದು ಕೊಡಬಹುಲ್ಲದೆ, ಕಲಿತನವ ಕೊಡಬಹುದೆ?
ವಿವಾಹ ಮಾಡಬಹುದಲ್ಲದೆ, ಪುರುಷತನವನರಸಬಹುದೆ?
ಘನವ ತೋರಬಹುದಲ್ಲದೆ, ನೆನೆಹ ನಿಲಿಸಬಹುದೆ?
’ಓದೊಕ್ಕಾಲು ಬುದ್ಧಿ ಮುಕ್ಕಾಲು’ ಎಂಬ ಲೋಕದ ಮಾತಿನಂತೆ
ಸದ್ಗುರು ಕಾರುಣ್ಯವಾದರೂ ಸಾಧಿಸಿದವನಿಲ್ಲ ಸಕಳೇಶ್ವರಾ

TRANSLITERATION

Eriya kaTTabahudallade nIra tuMbabahude?
Kaidu koDabahudallade kalitanava koDabahude?
Vivaaha maaDabahudallade, puruShatanavanarasabahude?
Ghanava tOrabahudallade, neneha nilisabahude?
‘Odokkaalu buddhi mukkaalu’ eMba lOkada maatinaMte
Sadguru kaaruNyavaadarU saadhisidavanilla sakalEshavaraa


CLICK HERE TO READ-ALONG:

http://youtu.be/QmFi7ltCpSk

TRANSLATION (WORDS)

Eriya ( the raised bank) kaTTabahudallade (can be built) nIra (water) tuMbabahude? ( but can one fill it with?)
Kaidu (weapon) koDabahudallade(can be given) kalitanava (bravery) koDabahude?(but can one give?)
Vivaaha (marriage) maaDabahudallade,(can be conducted) puruShatanavanarasabahude?( but can one seek virility)
Ghanava (the profound) tOrabahudallade,(can be shown) neneha (attention) nilisabahude? ( but can one set, resolute)
‘Odokkaalu (study, reading is one fourth) buddhi (intelligence) mukkaalu (is three fourth)’ eMba (as) lOkada (world’s) maatinaMte (the saying goes)
Sadguru (the teacher, the guru) kaaruNyavaadarU (even with the blessings of) saadhisidavanilla
(there is no one who has achieved) sakalEshavaraa (Sakaleshvara)


TRANSLATION

The tank bund can be built, but can it be filled with water?
The weapons can be provided, but can bravery be imparted?
The marriage can be conducted, but can one seek virility?
The profound can be shown, but can attention be set (can one be made resolute)?
As the saying goes, ‘Reading is one fourth, intelligence is three fourth,’
Even with the blessings of Guru, no one has achieved It, Oh Sakaleshvara!


COMMENTARY


In previous postings we have addressed the importance of Guru’s blessings and corresponding intense desire and awareness in the disciple for successful transmission of the knowledge. In this Vachana, Sharana Sakalesha Maadarasa says that Guru’s blessing is not the end of it all. It is just the first step and there is something more needed, and it depends on the disciple.
We can build the raised bank (bund) of a tank (lake), but filling it with water requires adequate rainfall. In addition to the rain, the water needs to be channeled to fill the tank. Thus, success in making the tank complete is a combined effort of the man and the divine. We can provide the most powerful weapons to a soldier, but he cannot use them efficiently without inherent bravery. The bravery is a result of his practice and training of the body, and the invisible force that bestows him with the mental strength. Similar combination is needed for the development of virility in married individuals. Along the same lines, the Guru can show the profound, but cannot make the disciple set on the profound. The combination of persistence practice by the disciple and his inherent nature to stabilize the mind on the profound is needed. It is said that ‘reading and studying is only one fourth of the effort, the intelligence is the rest of three-fourth. That means, in addition to the efforts by the individual, we need some abstract power that propels us to find the divine. That power could be our inherent nature. It should be recognized and kindled to achieve the ultimate knowledge. Maadarasa says that not many have achieved such capability.

In summary, Guru’s blessings and lessons give us the initial resource towards achieving the ultimate knowledge. We then try to supplement that initial resource with persistent practice and develop an intense desire to achieve it. In this process, we end up making mental images of what needs to be achieved. This image and the intense desire sway us away from achieving the ultimate. Since the ultimate is beyond the sphere of human mind, it cannot be visualized or desired. We should develop a clear understanding of how the mind works and enhance our inner strength to see the ultimate. This inner strength is the invisible divine power, the three-fourth component.


Let us expand our inner strength to invite the divine power into us!


KANNADA COMMENTARY

ಹಿಂದೆ ನಾವು ಗುರುಕಾರುಣ್ಯವೆಂದರೇನು? ಮತ್ತು ಅದು ಎಷ್ಟು ಮುಖ್ಯವೆಂಬುದನ್ನು ತಿಳಿದುಕೊಂಡೆವು. ಆದರೆ ಈ ವಚನದಲ್ಲಿ ಸಕಲೇಶ ಮಾದರಸರು ಕೇವಲ ಗುರು ಕಾರುಣ್ಯವಾದರೆ ಸಾಲದು, ಅದು ಮೊದಲ ಮೆಟ್ಟಿಲು, ಅದೇ ಕೊನೆಯಲ್ಲ, ಅದಕ್ಕಿಂತ ಹೆಚ್ಚಿನದೇನೋ ಇದೆ. ಅದು ಶಿಷ್ಯನನ್ನು ಅವಲಂಬಿಸಿದೆ ಎಂಬುದನ್ನು ದೃಷ್ಟಾಂತ ಸಹಿತ ಹೇಳುತ್ತಿದ್ದಾರೆ.
ಏರಿಯನ್ನು ಕಟ್ಟಬಹುದು, ಆದರೆ ಆ ಕೆರೆಯಲ್ಲಿ ನೀರನ್ನು ತುಂಬಬಹುದೆ? ಅಲ್ಲಿ ನೀರು ತುಂಬ ಬೇಕಾದರೆ ಮಳೆ ಬರಬೇಕು. ಅಂದರೆ ದೈವ ಅಥವಾ ಪ್ರಕೃತಿ ಒಲಿಯಬೇಕು. ಮತ್ತು ವ್ಯಕ್ತಿಯ ಪ್ರಯತ್ನವೂ ಸೇರಬೇಕು. ಬೇರೆ ಬೇರೆ ಕಡೆ ಹರಿದು ಹೋಗುವ ನೀರನ್ನು ಕೆರೆಗೆ ಹರಿದು ಬರುವಂತೆ ಮಾಡಬೇಕು. ಆಗ ಕೆರೆ ಪೂರ್ತಿಯಾಗಿ ತುಂಬಬಹುದು. ಶಸ್ತ್ರಾಸ್ತ್ರಗಳನ್ನು ಕೊಡಬಹುದು. ಆದರೆ ಕಲಿತನವ ಕೊಡಬಹುದೆ? ಎಂಬುದು ಎರಡನೆಯ ದೃಷ್ಟಾಂತ. ವ್ಯಕ್ತಿಯ ಕೈಯಲ್ಲಿ ಶಸ್ತ್ರಗಳನ್ನು ಕೊಟ್ಟರೂ ಆತನಲ್ಲಿ ಶೌರ್ಯವಿಲ್ಲದಿದ್ದರೆ ಏನು ಪ್ರಯೋಜನ? ಆ ಶೌರ್ಯವು ಅದೃಶ್ಯ ಶಕ್ತಿ ಮತ್ತು ಪುರುಷ ಸಾಧನೆ ಎರಡರ ಮೇಳದ ಪರಿಣಾಮ. ದೈಹಿಕ ವ್ಯಾಯಾಮ, ಒಳ್ಳೆಯ ಆಹಾರ, ನಿರಂತರ ಅಭ್ಯಾಸದಿಂದ ಶಾರೀರಿಕ ಬಲವನ್ನು ಪಡೆಯಬಹುದು ಆದರೆ ಮಾನಸಿಕ ಧೈರ್ಯ ಶೌರ್ಯಗಳು ಬೇರೆ ರೀತಿಯ ಸಾಧನೆಯಿಂದ ಒದಗುತ್ತವೆ. ಇದೇ ಮಾತು ಪುರುಷತನಕ್ಕೂ ಅನ್ವಯಿಸುತ್ತದೆ. ವಿವಾಹವನ್ನು ಮಾಡಿಸಬಹುದು ಆದರೆ ಪುರುಷತನವನ್ನು ಕೊಡಲಾಗುವುದಿಲ್ಲ. ಗುರುವಾದವನು ಘನವನ್ನು ತೋರಿಸಬಹುದು ಆದರೆ ಆ ಘನದಲ್ಲಿ ಮನವನ್ನು ನಿಲ್ಲಿಸುವುದು, ಆ ವ್ಯಕ್ತಿ ತನ್ನಲ್ಲಿ ಸುಪ್ತವಾಗಿರುವ ಶಕ್ತಿಯಿಂದ ಮಾಡಬೇಕು. ಇಲ್ಲಿ ಕೊಟ್ಟಿರುವ ಸಕಲ ದೃಷ್ಟಾಂತಗಳಲ್ಲಿಯೂ ಪುರುಷ ಪ್ರಯತ್ನದ ಜೊತೆಗೆ ಇನ್ನಾವುದೋ ಅದೃಶ್ಯ ಶಕ್ತಿಯೂ ಬೇಕಾಗುತ್ತದೆ ಎಂಬ ಸೂಚನೆ ಇದೆ. ಅದು ನಮ್ಮಲ್ಲಿಯೇ ಸುಪ್ತವಾಗಿರುವ ಶಕ್ತಿಯಾಗಿರಬಹುದು. ಅದನ್ನು ಗುರುತಿಸಿ ಜಾಗೃತಗೊಳಿಸ ಬೇಕು. ”ಓದು ಒಕ್ಕಾಲು ಬುದ್ಧಿ ಮುಕ್ಕಾಲು” ಎಂದು ಕೂಡ ಹೇಳುತ್ತಾರೆ. ಎಷ್ಟೇ ಅದ್ಯಯನ ಮಾಡಿದರೂ ಅದು ನಾಲ್ಕನೇ ಒಂದಂಶ ಮಾತ್ರವಾಗಿರುತ್ತದೆ. ಅದರಲ್ಲಿ ಮುಕ್ಕಾಲು ಬುದ್ಧಿ ಸೇರಿದಾಗ ಮಾತ್ರ ಅದು ಅರ್ಥಪೂರ್ಣವಾಗುತ್ತದೆ. ಇದು ಲೋಕೋಕ್ತಿ. ಗುರು ಕಾರುಣ್ಯವು ನಾಲ್ಕನೆ ಒಂದಂಶ. ಅದರಲ್ಲಿ ಶಿಷ್ಯನ ಪ್ರಯತ್ನ, ಅಂದರೆ ಪೂರ್ಣ ಜ್ಞಾನವನ್ನು ಪಡೆಯಲು ಬೇಕಾಗುವ, ತನ್ನಲ್ಲಿ ಇರುವ ಸುಪ್ತ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳುವುದು ಆತನ ಸಾಧನೆ. ಅದೇ ಹೆಚ್ಚಿನ ಮಹತ್ವದ್ದು. ಅದನ್ನು ಸಾಧಿಸಿದವರು ಯಾರೂ ಇಲ್ಲ ಎನ್ನುತ್ತಾರೆ ಸಕಲೇಶ ಮಾದರಸರು. ಎಂದರೆ ಅದು ಅತ್ಯಂತ ವಿರಳ. ಎಲ್ಲರೂ ಗುರು ಕಾರುಣ್ಯವಾಯಿತೆಂದು ತೃಪ್ತಿಪಟ್ಟು ಕೊಂಡು ಅಷ್ಟಕ್ಕೇ ಸುಮ್ಮನಿದ್ದು ಬಿಡುತ್ತಾರೆ, ಅಥವಾ ಅಹಂಕಾರದಿಂದ ಮೆರೆಯುತ್ತಾರೆ. ಅಂತಹವರಿಗೆ ಅಲ್ಲಿಗೇ ಎಲ್ಲವೂ ಮುಗಿಯಲಿಲ್ಲ. ಇನ್ನೂ ಸಾಧಿಸಬೇಕಾದುದು ಮುಕ್ಕಾಲು ಪಾಲು ಇದೆ ಎಂಬುದನ್ನು ಈ ವಚನದ ಮೂಲಕ ತಿಳಿಸುತ್ತಿದ್ದಾರೆ.

ಈ ಮುಕ್ಕಾಲು ಪಾಲು ಇರುವುದನ್ನು ಹೇಗೆ ಸಾಧಿಸಬಹುದು? ಎನ್ನುವ ಪ್ರಶ್ನೆ ಹುಟ್ಟುತ್ತದೆ. ಏಕೆಂದರೆ ಅದನ್ನು ಪಡೆಯುವುದು ಮನುಷ್ಯ ಪ್ರಯತ್ನದಿಂದ ಸಾಧ್ಯವಿಲ್ಲ ಎಂದು ವಚನಕಾರರು ಹಿಂದಯೇ ಹೇಳಿರುವರು . ಅಂದರೆ ಪೂಜೆ ಮಾಡುವುದರಿಂದ, ಶಾಸ್ತ್ರಗಳನ್ನು ಓದುವುದರಿಂದ ಅಥವಾ ಯೋಗಾಸನಗಳನ್ನು ಮಾಡುವುದರಿಂದ ಅದು ಲಭ್ಯವಾಗುವುದಿಲ್ಲ. ಹಾಗಾದರೆ ಏನು ಮಾಡುವುದು? ಏನಾದರೂ ಮಾಡಿ ಅದನ್ನು ಪಡೆಯಬೇಕೆನ್ನುವ ಆತುರತೆಯನ್ನು ಮೊದಲು ಕಳೆದುಕೊಳ್ಳಬೇಕು. ಏಕೆಂದರೆ ಹಾಗೆ ಮಾಡಿದಾಗ ಅದರಬಗ್ಗೆ ನಮ್ಮ ಮನಸ್ಸಿನಲ್ಲಿ ನಮಗೆ ತಿಳಿಯದೆಯೆ ಅದರ ಬಗ್ಗೆ ಒಂದು ಚಿತ್ರ ಮೂಡಿರುತ್ತದೆ. ಮತ್ತು ನಾವು ಅದನ್ನು ಅರಸುತ್ತೇವೆ. ಆದರೆ ಆ ಪರತತ್ವ ಮನೋ ವಲಯದಿಂದಾಚೆಗೆ ಇರುವಂತಹುದು ಎಂದು ಹೇಳುತ್ತಾರೆ. ಅದರ ಬಗ್ಗೆ ಯಾವ ನಿರೀಕ್ಷೆಯೂ ಇರದಂತೆ ನೋಡಿಕೊಳ್ಳುವುದೇ ಬಹು ಮುಖ್ಯ. ಅಥವಾ ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುವುದು ಮುಖ್ಯ. ಅದು ಸಾಮಾನ್ಯವಾದ ಕೆಲಸವಲ್ಲ. ಅದಕ್ಕೆ ಅಪಾರವಾದ ಆತ್ಮ ಬಲ ಬೇಕು. ಇದನ್ನೇ ಇಲ್ಲಿ ಆ ಮತ್ತೊಂದರ ಕೃಪೆ ಎಂದು ಹೇಳುತ್ತಿರುವುದು.


Friday, April 27, 2012

Vachana 87: Brahmananaagali Kshatriyanaagali - True Disciple

ಬ್ರಾಹ್ಮಣನಾಗಲಿ ಕ್ಷತ್ರಿಯನಾಗಲಿ ವೈಶ್ಯನಾಗಲಿ ಶೂದ್ರನಾಗಲಿ
ಆವ ಜಾತಿಯಲ್ಲಿ  ಹುಟ್ಟಿದಾತನಾದರೂ ಆಗಲಿ
ಗುರು ಕಾರುಣ್ಯ ಪಡೆದು ಅಂಗದ ಮೇಲೆ ಲಿಂಗವ ಧರಿಸಿದವನು
ಆಚಾರ ಸಂಪನ್ನ ಸತ್ಕ್ರಿಯನಾದ ಮಹಾತ್ಮನೇ
ಮೂರು ಲೋಕಕ್ಕೆ ಅಧಿಕಾರಿಯು ನೋಡಾ ಅಖಂಡೇಶ್ವರಾ.


TRANSLITERATION

braahmaNanaagali kShatriyanaagali vaishyanaagali shUdranaagali
aava jaatiyalli huTTidaatanaadarU aagali
guru kaaruNya paDedu aMgada mEle liMgava dharisidavanu
aacaara saMpanna satkriyanaada mahaamanE
mUru loKakke adhikaariyu nODaa akhaMDEshvaraa.


CLICK HERE TO READ-ALONG:
 http://youtu.be/dzgK-OHF68Y
TRANSLATION (WORDS)

braahmaNanaagali  (let him  be a Brahmin , born in the highest caste) kShatriyanaagali (let him be a warrior) vaishyanaagali ( let him be a trader) shUdranaagali (let him be a manual laborer)
aava( whichever) jaatiyalli ( caste) huTTidaatanaadarU aagali (let him be born )
guru (the Guru,the  teacher) kaaruNya (blessings) paDedu(received)  aMgada mEle ( on the body) liMgava (Linga, the icon of God) dharisidavanu (who wares)
aacaara(good behavior) saMpanna (the one with) satkriyanaada ( one with right actions) mahaatmanE ( great soul indeed)
mUru (three) loKakke (worlds) adhikaariyu (authority over) nODaa (you see) akhaMDEshvaraa. (Akhamdeshvara)

TRANSLATION

Whether one is a Brahmin, Kshatriya, Vysya or Sudra,
No matter which caste one is born in,
After earning the blessings of the Guru, the one who wares Linga on his body,
and the one with good conduct and right actions, is the great soul indeed!
He is the authority over the three worlds, you see, Akhamdeshvara!

COMMENTARY

In previous postings we have addressed the concept of Guru, the teacher. It is said that Guru appears when the disciple is ready, or the disciple finds the Guru when he is ready for receiving the knowledge. In this Vachana, Sharana Shanmuka Swamy addresses as to who would be qualified to be a disciple and the state the disciple would reach once blessed by the Guru. 

It is apparent that the four-caste system consisting of Brahmin (knowledge bearer, the highest caste), Kshatriya (warrior, protector), Vysya (Trader, Merchant) and Sudra (manual laborer, the lowest caste) was very prevalent and hence Sharana Shanmuka Swamy clarifies that it is immaterial as to which cast the disciple is born in.  As long as the disciple earns/receives the blessings of the guru, he becomes eligible for the divine knowledge.  As we have mentioned in previous postings, guru is not limited to be an individual, rather it is a concept.  Those who develop an intense desire to be enveloped by this concept, obtain the keenness of detecting the subtlety in all things around them. Such subtle nature enables them to see the truth beyond what appears at the surface of entities around them. That is the blessing of the guru.  As a symbol of acquiring the subtle divine principle, guru offers the disciple Linga, the icon of the divine principle. The disciple wears the Linga on his body. It is not sufficient to wear the Linga as a ritual, but the disciple has to grasp the true meaning behind it and conduct himself well in all aspects and perform right actions. He thus becomes the authority of all the three worlds (Heaven, Mortal and Hell), implying that he is capable of realizing the whole Universe, commonly believed to be consisting of the three worlds.  Shanmuka Swamy says that such a true disciple has reached the ultimate level of merger with the God, the so called Linga-Anga saamarasya.

In general, understanding the material of which any given object is made yields an understanding of everything else made of the same material.  For example, understanding properties of Gold, allows understanding of all jewelry made of Gold no matter what their shapes and sizes are. Similarly, all things in this world, although identified with different names and shapes, have the same life source.  The blessing of guru provides us the insight into this life source and allows us to talk authoritatively about all entities around us.  Such blessing and insight are not limited by the caste one is born in.


Let our conduct and actions become that of a blessed disciple!


KANNADA COMMENTARY


ಇಲ್ಲಿಯವರೆಗೆ ಗುರುವಿನ ಬಗ್ಗೆ ತಿಳಿದುಕೊಂಡೆವು. ಈಗ ಇಲ್ಲಿ ಶಿಷ್ಯನ ಬಗ್ಗೆ ಹೇಳುತ್ತಿದ್ದಾರೆ ಷಣ್ಮುಖಸ್ವಾಮಿಗಳು. ಶಿಷ್ಯನಾಗಲು ಯಾರು ಅರ್ಹರು ಮತ್ತು ಗುರುವಿನ ಕಾರುಣ್ಯದಿಂದ ಶಿಷ್ಯನು ಯಾವ ಸ್ಥಿತಿಗೇರುತ್ತಾನೆ ಎಂಬುದನ್ನು ಷಣ್ಮುಖಸ್ವಾಮಿಗಳು ಬಹಳ ಸೊಗಸಾಗಿ ಹೇಳಿದ್ದಾರೆ. 
ಶಿಷ್ಯನು, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಅಥವಾ ಶೂದ್ರ ಯಾವ ಜಾತಿಯವನೇ ಆಗಲಿ ಆತನಿಗೆ ಗುರು ಕಾರುಣ್ಯ ಉಂಟಾಗಿದ್ದರೆ ಸಾಕು ಅದೇ ಆತನಿಗೆ ಜ್ಞಾನಿಯಾಗುವ ಅರ್ಹತೆಯನ್ನು ಒದಗಿಸುತ್ತದೆ ಎನ್ನುತ್ತಾರೆ, ಆದರೆ ಗುರು ಕಾರುಣ್ಯವೆಂದರೇನು? ಅದು ಹೇಗೆ ಉಂಟಾಗುತ್ತದೆ?  ಸಾಮಾನ್ಯವಾಗಿ ನಾವು ಗುರುಕಾರುಣ್ಯವೆಂದರೆ  ಗುರು ವ್ಯಕ್ತಿಯ ರೂಪದಲ್ಲಿ ಬಂದು  ಶಿಷ್ಯನಿಗೆ ಉಪದೇಶಿಸುತ್ತಾನೆ ಎಂದುಕೊಳ್ಳುತ್ತೇವೆ. ಗುರುವು ಶಿಷ್ಯನನ್ನು ಹುಡುಕಿಕೊಂಡು ಬರುತ್ತಾನೆ, ಶಿಷ್ಯನು ಹಂಬಲಿಸಿದರೆ ಸಾಕು ಗುರು ತಾನೇ ಸ್ವತಃ ಹುಡುಕಿಕೊಂಡು ಬಂದು ಕರುಣಿಸುತ್ತಾನೆ ಎಂಬಂತಹ ಮಾತುಗಳನ್ನು ಎಲ್ಲರೂ ಕೇಳಿರುತ್ತಾರೆ. ಆದರೆ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ಹಿಂದೆಯೇ  ನಾವು ಗುರುವು ಕೇವಲ ವ್ಯಕ್ತಿಯಲ್ಲ, ಅಮೂರ್ತವಾದ ಬೆಳಕಾಗಿ ಬರುವ ತತ್ವ ಎಂಬುದನ್ನು ಕಂಡುಕೊಂಡಿದ್ದೇವೆ. ಯಾರಿಗೆ ಮನಸ್ಸಿನಲ್ಲಿ ಆ ತತ್ವವನ್ನು ಹೊಂದಬೇಕೆನ್ನುವ ಆಳವಾದ
ಹಂಬಲವಿರುತ್ತದೆಯೋ ಆತನಿಗೆ ದೈವಕೃಪೆಯಾಗುತ್ತದೆ. ಅಂದರೆ ಆತನ ಮನಸ್ಸು ಸೂಕ್ಷ್ಮವಾಗಿ ಎಲ್ಲವನ್ನೂ ಹೊಸ ದೃಷ್ಟಿಯಿಂದ ನೋಡಲುಪಕ್ರಮಿಸುತ್ತದೆ.  ಆತನಿಗೆ ಜಗತ್ತಿನ ಪ್ರತಿಯೊಂದರಲ್ಲಿ ಬೇರೆ ಯಾವುದೋ ತತ್ವದ ಆಟ ಕಾಣುತ್ತದೆ. ಮೇಲು ನೋಟಕ್ಕೆ ಕಾಣುವುಷ್ಟೇ ಪೂರ್ಣ ಸತ್ಯವಲ್ಲ ಅಲ್ಲ, ಅದನ್ನು ಮೀರಿದುದದೇನೋ ಕಾಣಿಸುತ್ತದೆ.  ಈ ಸೂಕ್ಶ್ಮ ದೃಷ್ಟಿಯ ಲಾಭವೇ ಒಂದು ರೀತಿಯಿಂದ ಗುರು ಕಾರುಣ್ಯವೆಂದು ಹೇಳಬಹುದು. ಈ ರೀತಿಯ ಗುರು ಕಾರುಣ್ಯ ಉಂಟಾದ ಯಾವ ಜಾತಿಯ ವ್ಯಕ್ತಿಯೇ ಆಗಲಿ ದೀಕ್ಷೆಗೆ ಅರ್ಹನಾಗುತ್ತಾನೆ ಎನ್ನುತ್ತಾರೆ ಷಣ್ಮುಖ ಸ್ವಾಮಿಗಳು. ಇದನ್ನು ಸರಿಯಾಗಿ ಅರ್ಥಮಾಡಿಕೊಂಡವರಿಗೆ ಜಾತಿಯ ಪ್ರಶ್ನೆಯೇ ಹುಟ್ಟುವುದಿಲ್ಲ.  

ಗುರು ಕಾರುಣ್ಯ ಪಡೆದು ಅಂಗದ ಮೇಲೆ ಲಿಂಗವ ಧರಿಸಿದವನು
ಆಚಾರ ಸಂಪನ್ನ ಸತ್ಕ್ರಿಯನಾದ ಮಹಾತ್ಮನೇ
ಮೂರು ಲೋಕಕ್ಕೆ ಅಧಿಕಾರಿಯು ನೋಡಾ ಅಖಂಡೇಶ್ವರಾ ಎನ್ನುತ್ತಾರೆ. ಗುರುಕಾರುಣ್ಯವೇ ಎಲ್ಲವೂ ಅಲ್ಲ. ಆ ದಾರಿಯಲ್ಲಿ ಇನ್ನೂ ಮುಂದುವರಿಯ ಅವಶ್ಯಕತೆಯಿರುತ್ತದೆ. ಆ ದಾರಿ, ಆತನಿಗೆ ವ್ಯಕ್ತಿಯ ರೂಪದಲ್ಲಿ ಬರುವ ಗುರುವಿನಿಂದ ತಿಳಿಯುತ್ತದೆ. ಆ ಗುರು  ಶಿಷ್ಯನಿಗೆ ಆ ಪರತತ್ವದ ಕುರುಹಾದ ಲಿಂಗವನ್ನು ಅನುಗ್ರಹಿಸುತ್ತಾನೆ. ಆ ಗುರುವಿನ ಸಹಾಯದಿಂದ ಶಿಷ್ಯನು ಲಿಂಗವನ್ನು ಧರಿಸಿ ಆಚಾರ ಸಂಪನ್ನ ಮತ್ತು ಸತ್ಕ್ರಿಯವಂತನಾಗುತ್ತಾನೆ. “ಆಚಾರ” ವೆನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ವಿಭೂತಿ ಧರಿಸುವುದು, ಲಿಂಗ ಪೂಜೆ ಮಾಡುವುದು ಮಾತ್ರ ಆಚಾರವಲ್ಲ. “ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಡೆ  ಆ ಕಲ್ಲು ಲಿಂಗವೆ? ಆ ಮೆಳೆ ಭಕ್ತನೆ? ಇಟ್ಟಾತ ಗುರುವೆ?” ಎಂದು ಹೇಳಿ ಅದು ಆಚಾರವಲ್ಲ ಎಂದು ಅಲ್ಲಮರು ಮೊದಲೇ ಹೇಳಿದ್ದಾರೆ. ’ಅಂತರಂಗ ಬಹಿರಂಗ ಶುದ್ಧಿ” ಬಹು ಮುಖ್ಯವೆಂದು ಬಸವಣ್ಣನವರು ಹೇಳಿದ್ದಾರೆ. ಎಲ್ಲವನ್ನೂ ಸೂಕ್ಷ್ಮವಾಗಿ ನೋಡಿ, ಕಂಡುಕೊಳ್ಳುವವ ಲಿಂಗಧಾರಣೆಯನ್ನು ಮತ್ತು ಇತರ ಅಚಾರ ಮತ್ತು ಸತ್ಕ್ರಿಯೆಗಳನ್ನು ಕೇವಲ ಶಾಸ್ತ್ರಕ್ಕಾಗಿ ಮಾಡುವವನಲ್ಲ. ಆತನು ಅದರ ಹಿಂದೆ ಇರುವ ಅರ್ಥವನ್ನು ಕಾಣುತ್ತಾನೆ. ಆದ್ದರಿಂದ ಅದು ಕೇವಲ ಬಾಹ್ಯ ಆಚಾರವಾಗುವುದಿಲ್ಲ.  ಅಂತಹ ವ್ಯಕ್ತಿ ಮೂರುಲೋಕಕ್ಕೂ ಅಧಿಕಾರಿಯಾಗುತ್ತಾನೆ ಎಂದು ಹೇಳುತ್ತಾರೆ. ಮೂರು ಲೋಕ ಎಂದರೆ “ಸ್ವರ್ಗ, ಮರ್ತ್ಯ ಮತ್ತು ಪಾತಾಳ ಅಥವಾ ನರಕ” ವೆಂದರ್ಥ. ಈ ಲೋಕಗಳಿಗೆ ಅಧಿಕಾರಿಯಾಗುವುದೆಂದರೇನು? 
ಮೂರು ಲೋಕವೆಂದರೆ ಇಲ್ಲಿ ಇಡೀ ವಿಶ್ವ ಎಂದರ್ಥ. ವಿಶ್ವಕ್ಕೆ ಅಧಿಕಾರಿ ಎಂದರೆ ಈ ವಿಶ್ವದ ಪ್ರತಿಯೊಂದರ ಬಗ್ಗೆ ಅಧಿಕಾರದಿಂದ ಮಾತನಾಡುವ ಸಾಮರ್ಥ್ಯ ಆತನಿಗೆ ಇರುತ್ತದೆ ಎಂದರ್ಥ.  ಈ ಸಾಮರ್ಥ್ಯ ಆತನಿಗೆ ಹೇಗೆ ಒದಗುತ್ತದೆ? ಇದನ್ನು ಅರುಹುವ ಒಂದು ಕತೆ ಉಪನಿಷತ್ತಿನಲ್ಲಿ ಬರುತ್ತದೆ.

ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ  ಒಂದು ಕತೆ: 
ಉದ್ದಾಲಕ ಮಹರ್ಷಿಯು ತನ್ನ ಮಗ ಶ್ವೇತಕೇತುವನ್ನು ವಿದ್ಯಾರ್ಜನೆಗಾಗಿ ಗುರುಕುಲಕ್ಕೆ ಕಳಿಸುತ್ತಾನೆ. ಗುರುಕುಲದಲ್ಲಿ ಅನೇಕ ವಿಷಯಗಳ ಅಧ್ಯಯನ ಮಾಡಿ ವಿದ್ಯಾಭೂಷಣನಾಗಿ ಶ್ವೇತಕೇತು ಹಿಂತಿರುಗುತ್ತಾನೆ. ಆತನಿಗೆ ಆಗಲೆ ತಾನು ಗಳಿಸಿದ ವಿದ್ಯೆಯ ಬಗ್ಗೆ ಸಾಕಷ್ಟು ಅಹಂಕಾರ ಉಂಟಾಗಿರುತ್ತದೆ. ಅದನ್ನು ಕಂಡು ಉದ್ದಾಲಕನು ಮಗನನ್ನು ಕುರಿತು “ ಶೇತಕೇತು! ಈಗಾಗಲೇ ನೀನು ಜಗತ್ತಿನಲ್ಲಿರುವ ಎಲ್ಲ ವಿದ್ಯೆಗಳನ್ನೂ ಕಲಿತಿರುವೆಯಲ್ಲವೆ?” ಎಂದು ಕೇಳುತ್ತಾನೆ. “ಹೌದು” ಎಂದುತ್ತರಿಸುತ್ತಾನೆ ಶ್ವೇತಕೇತು.
“ಆದರೆ,  ತಿಳಿಯದೆ ಇರುವುದನ್ನು ತಿಳಿಯುವ, ಗ್ರಹಿಸಲು ಬಾರದುದನ್ನು ಗ್ರಹಿಸುವ, ಕಿವಿಗೆ ಕೇಳಿಸದೆ ಇರುವಂತಹದನ್ನು ಕೇಳಿಸಿಕೊಳ್ಳುವ ವಿದ್ಯೆ ನಿನಗೆ ಲಭಿಸಿದೆಯೆ?” ಎಂದು ಕೇಳುತ್ತಾನೆ. ಈ ಪ್ರಶ್ನೆಯಿಂದ ಅಚ್ಚರಿಗೊಂಡು ಶ್ವೇತಕೇತುವು “ಅಂತಹ ವಿದ್ಯಯೊಂದಿದ್ದರೆ ಅದನ್ನು ನೀವು ನನಗೆ ದಯಪಾಲಿಸಿರಿ” ಎಂದು ಕೇಳಿಕೊಳ್ಳುತ್ತಾನೆ. ಆಗ ಉದ್ದಾಲಕನು ಕೆಲ ಪ್ರಯೋಗಗಳಿಂದ  ಮತ್ತು ಉದಾಹರಣೆಗಳಿಂದ ಆ ವಿದ್ಯೆಯು ಮಗನಿಗೆ ಅರ್ಥವಾಗುವಂತೆ ಮಾಡುತ್ತಾನೆ. ಶ್ವೇತಕೇತುವಿನ ಅಹಂಕಾರ ಕಳೆದುಹೋಗುತ್ತದೆ. ಅದರಲ್ಲಿಯ ಒಂದು ಉದಾಹರಣೆಯನ್ನು ಇಲ್ಲಿ ಉದ್ಧರಿಸಬಹುದು:

“ಮಣ್ಣಿನ ಗುಣಗಳನ್ನು ಅರಿತುಕೊಂಡಾಗ ಮಣ್ಣಿನಿಂದ ಮಾಡಿದ ಎಲ್ಲವುಗಳನ್ನು ತಿಳಿಯಬಹುದು. ಚಿನ್ನದ ಗುಣಗಳನ್ನು ಅರಿತಾಗ ಚಿನ್ನದಿಂದ ಮಾಡಿದ ಎಲ್ಲವುಗಳನ್ನು ಅರಿಯಬಹುದು. ಕೇವಲ ಅವುಗಳ ಆಕಾರ ಮತ್ತು ಹೆಸರುಗಳು ಬೇರೆಯಾಗಿರುತ್ತವೆ ಆದರೆ ಅವೆಲ್ಲವೂ ಮಣ್ಣಿನವೇ ಅಥವಾ ಚಿನ್ನದವೇ ಆಗಿರುತ್ತವೆ. ಅದೇ ರೀತಿ ಈ ಜಗತ್ತಿನಲ್ಲಿ ಕಂಡುಬರುವ  ಎಲ್ಲವುಗಳ ಹೆಸರುಗಳು ಮತ್ತು ಆಕಾರಗಳು ಬೇರೆಯಾಗಿವೆ. ಆದರೆ ಅವುಗಳಲ್ಲಿಯ ಚೈತನ್ಯ ಒಂದೇ ಆಗಿದೆ. Understanding the material of which any given object is made yields an understanding of everything else made of the same material.”  ಇದನ್ನು ತಿಳಿದುಕೊಂಡಾಗ ಆ ವಸ್ತುಗಳಬಗ್ಗೆ ಅಧಿಕಾರಯುತವಾಗಿ ಮಾತಾಡುವ ಸಾಮರ್ಥ್ಯ ತಾನೇ ತಾನಾಗಿ ಬರುತ್ತದೆ.”
ಅದೇ ರೀತಿಯಾಗಿ ಆಂತರಿಕವಾದ ಗುರುವಿನ ಕೃಪೆಯಿಂದ ಎಲ್ಲವುಗಳ ಬಗ್ಗೆ ಅಧಿಕಾರಯುತವಾಗಿ ಮಾತಾಡುವ ಒಳದೃಷ್ಟಿಉಂಟಾಗುತ್ತದೆ, ಈ ಒಳದೃಷ್ಟಿ ಯಾವ ಒಂದು ಜಾತಿಯ ವ್ಯಕ್ತಿಯ ಸ್ವತ್ತಲ್ಲ, ಎನ್ನುತ್ತಾರೆ ಷಣ್ಮುಖಸ್ವಾಮಿಗಳು.

Friday, April 20, 2012

Vachana 86: Lokadalliha Nuuraaru Gurugalu – True Teacher


ಲೋಕದಲ್ಲಿಹ ನೂರಾರು ಗುರುಗಳ ನೋಡಿ ನೋಡಿ ನಾನು ಬೇಸರಗೊಂಡೆನಯ್ಯಾ
ವಿತ್ತಾಪಹಾರಿ ಗುರುಗಳು ನೂರಾರು
ಶಾಸ್ತ್ರಾರ್ಥ ಹೇಳುವ ಗುರುಗಳು ನೂರಾರು,
ಮಂತ್ರತಂತ್ರದಿಂದುಭಯ ಲೋಕದಲ್ಲಿ ಸುಖದುಃಖವೀವ ಗುರುಗಳು ನೂರಾರು
ಸತ್ಕರ್ಮೋಪದೇಶವನರುಹಿ ಸ್ವರ್ಗಮರ್ತ್ಯದಲ್ಲಿ ಸುಖವೀವ ಗುರುಗಳು ನೂರಾರು;
ವಿಚಾರಮುಖದಿಂದ ಷಟ್ಸಾಧನೆಯನರುಹುವ ಗುರುಗಳು ನೂರಾರು.
ವಿಷಯಂಗಳೆಲ್ಲ ಮಿಥ್ಯಂಗಳೆಂದರುಹಿ ಆತ್ಮಾನುರಾಗತ್ವವನೀವ ಗುರುಗಳು ನೂರಾರು;
ಶಿವಜೀವರ ಏಕತ್ವವನರುಹಿ ನಿರ್ಮಲಜ್ಞಾನವೀವ ಗುರುಗಳು ಪ್ರಮಥರು.
ಸಂಶಯಾಳಿಗಳನೆಲ್ಲ ಜ್ಞಾನಾಗ್ನಿಯಿಂದ ದಹಿಸಿ ಮುಕ್ತಿಯ ಹಂಗೆಂಬುದ ಅರುಹಿನ ಬಂಧದಲ್ಲಿರಿಸಿದ ಗುರು
ಚೆನ್ನಬಸವಣ್ಣನಲ್ಲದೆ ಮತ್ತೋರ್ವನ ಕಾಣೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.


TRANSLITERATION
lOkadalliha nURaaru gurugaLa nODi nODi naanu bEsaragoMDenayya
vittaapahaari gurugaLu nUraaru
shaastraartha hELuva gurugaLu nUraaru,
maMtrataMtradiMdubhaya lOkadalli sukhaduHkhavIva gurugaLu nUraaru
satkaramOpadEshavanaruhi Svarga martydalli sukhavIva gurugaLu nUraaru
vicaaramukhadiMda ShaTsaadhaneyanruhuva gurugaLu nURaaru
viShayaMgaLella mithyaMgaLeMdaruhi aatmaanuraagatvavanIva gurugaLu nUraaru
shivajIvara Ekatvanaruhi nirmalaj~jaanavIva gurugaLu pramatharu.
saMshayaaLigaLanella j~jaanagniyiMda dahisi muktiya haMgeMbuda aruhina baMdhadallirisida guru
cennabasavaNNanallade mattOrvana kaaNe nODaa, kapilasiddhamallikaarjunaa.


CLICK HERE TO READ-ALONG:
http://youtu.be/T7jjCCSDUkk


TRANSLATION (WORDS)


lOkadalliha (present in this world) nURaaru (handreds of) gurugaLa ( teachers, gurus) nODi nODi (seeing again and again) naanu ( I) bEsaragoMDenayya ( am tired sir)
vittaapahaari (wealth stealing, taking away the wealth) gurugaLu (gurus) nUraaru (are hundreds)
shaastraartha ( explaination to rituals) hELuva (giving) gurugaLu (the gurus) nUraaru,(are hundreds)
maMtrataMtradiMda ( sacred verse and technique) ubhaya (both) lOkadalli (in the world)
sukha(happiness) duHkhav (suffering) Iva(giving) gurugaLu (the teachers) nUraaru (are hundreds)
satkaramOpadEshavanu (preaching good deeds) aruhi (informing, talking about)
Svarga (heaven) martydalli (in the mortal world) sukhavIva (giving pleasure) gurugaLu ( teachers ) nUraaru (hundreds of)
vicaaramukhadiMda (giving importance to thinking) ShaTsaadhaneyanruhuva(teaching six achievements) gurugaLu (teachers) nURaaru (are hundreds)
viShayaMgaLella ( all the objects of desire) mithyaMgaLeMdu (are false) aruhi (saying)
aatmaanuraagatvavanIva (making one self centered) gurugaLu nUraaru (teachers are hundreds)
shiva(god, shiva) jIvara (the living being) Ekatvanaruhi (making one know the unity of)
nirmalaj~jaanavIva (giving pure knowledge) gurugaLu (teachers) pramatharu (are pramathas, the early Sharanas)
saMshayaaLigaLanella (chain of doubts) j~jaanagniyiMda ( with the fire of pure knowledge) dahisi (burning)
muktiya ( of freedom) haMgeMbuda (obligation, debt) aruhina ( the awareness) baMdhadallirisida ( has kept it tied by) guru (the guru who)
cennabasavaNNanallade (ChennabasavaNNa) mattOrvana ( other than) kaaNe nODaa,(I don’t see sir!)
kapilasiddhamallikaarjunaa.(Kapilasiddhamallikaarjuna)


TRANSLATION
After seeing the hundreds of Gurus of this world over and over again, I am tired Sir!
There are hundreds of Gurus snatching your wealth.
There are hundreds of Gurus explaining the meaning of rituals.
There are hundreds of Gurus that offer pleasure and sorrow in this and the world beyond, through sacred verses and techniques.
There are hundreds of Gurus that preach good conduct that gives pleasure here and in heaven.
There are hundreds of Gurus that preach that intense thinking is the way to achieve the sixfold wealth.
There are hundreds of Gurus that say that all objects of desire are false and make one self-centered.
Pramathas (accomplished Sharanas) are the gurus that show the unity of Shiva (Linga, God) and Jeeva (Anga, individual) and provide the pure self-knowledge.
Having burnt the chain of doubts with the fire of knowledge, the only Guru who tied up the debt of freedom with ropes of awareness is Chennabasavanna and no one else, you see! Kapilasidda Mallikarjuna!


COMMENTARY


This Vachana is from Sharana Siddarameswara. Siddarameswara resident of Sholapur area is said to have become an ardent devotee of Shiva very early in his life. He devotes a major part of his life to worshipping Shiva in the form of temple-resident (Static, Sthavara) Linga. He also believed that serving community is an important part of devotee’s life and said to have constructed wells, shelters and lakes. Allama Prabhu in his effort to drive home to Siddarameswara that devotion and community projects are not the end in themselves, and the Self-knowledge and awareness of the unity of the Lord and the devotee (i.e. Linga-Anga Saamarasya) are the most important, brings him in contact with Sharanas at the city of Kalyana. Siddarameswara participates in Anubhava Mantapa (platform of experience) of Sharanas and becomes a disciple of Chennabasavanna (nephew of Basavanna). In this Vachana, Siddarameswara enumerates the variety of teachers (Gurus) found in the world and emphasizes that the true teacher is the one who enhances the intense desire and awareness to achieve self-realization.
It is apparent that even in the eleventh century (the time of Sharana movement) Gurus of various types and inclinations were present. Some were more interested in snatching the wealth of their disciples. Some gurus preached the ritualistic way of life. Some offered techniques to enhance pleasure and avoid sorrow in this and the next worlds. Some preached that the good conduct here is the only way to achieve heaven. Some advocated thinking and questioning as the mechanism for achieving the sixfold wealth: sama (Control of mind – ManoNigraha), dama (control of external senses, Baahyandriya Nigraha) , uparati (Withdrawing from objects, Vairaagya), titiksa (endurance of pain/pleasure, heat/cold, etc.), sradda(faith, belief) and samaadhana (single-pointedness of mind). Some teach that all objects of desire are false and one should get self-centered. Siddarameswara concludes that the Sharanas who have accomplished Linga-Anga Saamarasya (Unity with Him) are the only true Gurus who can remove the chain of doubts from disciple’s mind and impart pure knowledge of the self. They are the only Gurus who can show the true freedom through true awareness. In particular, Siddarameswara offers his utmost respect saying that his Guru Chennabasavanna is the only true guru that he has come across and no one else.


Let us become aware and gain pure self-knowledge through those who have achieved it!


KANNADA COMMENTARY


ಇದು ಸಿದ್ಧರಾಮೇಶ್ವರರ ವಚನ. ಇಲ್ಲಿ ಅವರು ಅನೇಕ ಬಗೆಯ ಗುರುಗಳ ವಿಷಯ ಹೇಳುತ್ತ ನಿಜವಾದ ಗುರು ಯಾರು ಎಂಬುದನ್ನು ಹೇಳುತ್ತಿದ್ದಾರೆ. ಈ ವಚನವನ್ನು ನೋಡಿದರೆ ಎಂಟು ನೂರು ವರ್ಷಗಳ ಹಿಂದೆಯೂ ಇಂದಿನ ಪರಿಸ್ಥಿತಿಯೇ ಇತ್ತು ಎಂಬುದು ಕಂಡುಬರುತ್ತದೆ. ಸಿದ್ಧರಾಮರು, ಲೋಕದಲ್ಲಿ ನೂರಾರು ಗುರುಗಳನ್ನು ನೋಡಿ ಬೇಸರಗೊಂಡೆನೆಂದು ಹೇಳುತ್ತಾರೆ. ಏಕೆಂದರೆ ಅವರೆಲ್ಲ ನಿಜವಾದ ಜ್ಞಾನವನ್ನು ತೋರದೆ ಅರ್ಥವಿಲ್ಲದ ಯಾವುದೋ ಒಂದನ್ನು ಜ್ಞಾನವೆಂದು ತೋರುತ್ತಾರೆ. ಅಷ್ಟೇ ಅಲ್ಲದೆ ಮೋಸಮಾಡುವ ಗುರುಗಳೂ ಇದ್ದಾರೆ. ಮೋಸ ಮಾಡಿ ಶಿಷ್ಯರಿಂದ ಹಣವನ್ನು ದೋಚುತ್ತಾರೆ. ಅವರ ಮಾತಿನ ಮೋಡಿಗೆ ಒಳಗಾಗಿ ಶಿಷ್ಯರು ಗುರುಗಳು ಕೇಳಿದ್ದನ್ನು ಕೊಡುತ್ತಾರೆ. ಇನ್ನು ಕೆಲವರು, ಶಾಸ್ತ್ರಗಳ ಅರ್ಥವನ್ನು ಹೇಳಿ ಶಿಷ್ಯರನ್ನು ಅದೇ ಜ್ಞಾನವೆನ್ನುವ ಭ್ರಮೆಯಲ್ಲಿಡುತ್ತಾರೆ. ಇನ್ನು ಅನೇಕ ಗುರುಗಳು ಮಂತ್ರ ತಂತ್ರಗಳನ್ನು ತಿಳಿಸುತ್ತ, ಅವುಗಳಿಗೆ ಇಲ್ಲದ ಮಹತ್ವವನ್ನು ಕೊಡುತ್ತ ಅವುಗಳಿಂದುಂಟಾಗುವ ಸುಖ ದುಃಖದಲ್ಲಿ ಶಿಷ್ಯರನ್ನು ಮುಳುಗಿಸುತ್ತಾರೆ, ಇನ್ನೂ ಹೆಚ್ಚಿನ ಅಜ್ಞಾನಕ್ಕೀಡುಮಾಡುತ್ತಾರೆ. ಇನ್ನೂ ನೂರಾರು ಗುರುಗಳು ಯಾವುದು ಒಳ್ಳೆಯ ಕರ್ಮ ಯಾವುದು ಕೆಟ್ಟ ಕರ್ಮ ಎಂಬುದನ್ನು ವಿವರಿಸುತ್ತ, ಒಳ್ಳೆಯ ಕರ್ಮ ಮಾಡಿದರೆ ಸ್ವರ್ಗವು ದೊರೆಯುತ್ತದೆ, ಕೆಟ್ಟ ಕರ್ಮ ಮಾಡಿದರೆ ಮರ್ತ್ಯದಲ್ಲಿಯೇ ಇರಬೇಕಾಗುತ್ತದೆ ಎಂದು ನಂಬಿಸಿ ಶಿಷ್ಯರನ್ನು ಸತ್ಯದಿಂದ ದೂರವಿರಿಸುತ್ತಾರೆ. ಇನ್ನು ಬಹು ಸಂಖ್ಯೆಯ ಗುರುಗಳು ವಿಚಾರಕ್ಕೆ ಪ್ರಾಮುಖ್ಯತೆ ಕೊಟ್ಟು ಷಟ್ಸಾಧನೆಗಳನ್ನು ತಿಳಿಸುತ್ತಾರೆ. ಶಮೆ, (ಆತ್ಮ ಸಂಯಮ), ದಮೆ(ಇಂದ್ರಿಯ ನಿಗ್ರಹ), ತಿತಿಕ್ಷೆ (ಸಹನೆ ,ತಾಳ್ಮೆ), ಉಪರತಿ (ವೈರಾಗ್ಯ), ಶ್ರದ್ಧೆ ಮತ್ತು ಸಮಾಧಾನ ಇವು ಷಟ್ಸಂಪತ್ತುಗಳು. ಇವುಗಳನ್ನು ಸಾಧಿಸುವುದು ಷಟ್ಸಾಧನೆ. ಇವೆಲ್ಲವುಗಳನ್ನು ಕೇವಲ ವಿಚಾರಗಳಿಂದ ಸಾಧಿಸುವುದು ಸಾಧ್ಯವಿಲ್ಲ. ವೈಚಾರಿಕತೆಯಿಂದ ಅವುಗಳನ್ನು ಬೌದ್ಧಿಕವಾಗಿ ತಿಳಿದುಕೊಳ್ಳಬಹುದೇ ಹೊರತು ಅವುಗಳನ್ನು ಹೊಂದುವುದು ಸಾಧ್ಯವಿಲ್ಲ. ಆದರೆ ಗುರುಗಳು, ಶಿಷ್ಯರನ್ನು, ಅವುಗಳನ್ನು ವಿಚಾರದಿಂದ ಸಾಧಿಸಬಹುದು ಎಂಬ ಭ್ರಮೆಯಲ್ಲಿಡುತ್ತಾರೆ. ಇಂದ್ರಿಯ ವಿಷಯಗಳೆಲ್ಲವೂ ಮಿಥ್ಯೆ ಎಂದು ತಿಳಿಸುತ್ತಾರೆ. ಅದು ಕೂಡ ಇನ್ನೊಂದು ರೀತಿಯ ಭ್ರಮೆ. ಇಂದ್ರಿಯ ಸುಖ ಬೇಕು ಎನ್ನುವವನಿಗೂ ಮತ್ತು ಇಂದ್ರಿಯ ಸುಖ ಬೇಡವೆನ್ನುವವನಿಗೂ ಲಿಂಗಾಂಗ ಸಾಮರಸ್ಯವಿಲ್ಲ ಎನ್ನುತ್ತಾರೆ ಶರಣರು. ಇಂದ್ರಿಯಗಳು ಮಿಥ್ಯೆ ಎಂದು ಪರಿಗ್ರಹಿಸಿ ಅವುಗಳನ್ನು ಕೃತಕವಾಗಿ ನಿಗ್ರಹದಲ್ಲಿಡುವುದು ಸಾಧ್ಯವೂ ಇಲ್ಲ ಮತ್ತು ಸಾಧುವೂ ಅಲ್ಲ. ಆದರೆ ಶಿಷ್ಯರಿಂದ ಇಂತಹದನ್ನು ಮಾಡಿಸುವರು ನೂರಾರು ಗುರುಗಳು. ಅವುಗಳನ್ನು ನಿಗ್ರಹದಲ್ಲಿಟ್ಟಿದ್ದೇನೆ ಎನ್ನುವ ಭ್ರಮೆಯಲ್ಲಿ ಶಿಷ್ಯ ಆ ಸಾಧನೆಯ ಅಹಮ್ಮಿನಲ್ಲಿರುತ್ತಾನೆ. ಆತನು ತನ್ನ ಬಗ್ಗೆಯೇ ಅನುರಾಗದಲ್ಲಿ ಮೈ ಮರೆಯುತ್ತಾನೆ, ಎನ್ನುತ್ತಾರೆ ಸಿದ್ಧರಾಮೇಶ್ವರರು. ಇಂತಹ ಶಿಷ್ಯರನ್ನು ತಯಾರಿಸುವ ಗುರುಗಳು ನೂರಾರು ಸಿಗುತ್ತಾರೆ ಎನ್ನುತಾರೆ. ಆದರೆ ಶಿವ ಮತ್ತು ಜೀವ ಇವರ ಏಕತೆಯನ್ನು ತಿಳಿಸಿ, ಯಾವ ಭ್ರಮೆಗೂ ಒಳಗಾಗದೆ, ಯಾವ ಪ್ರಭಾವಕ್ಕೂ ಒಳಗಾಗದೆ ಇರುವ ನಿರ್ಮಲವಾದ ಜ್ಞಾನವನ್ನು ಉಂಟುಮಾಡುವವರು ಕೇವಲ ಪ್ರಮಥರು, ಎಂದರೆ ಸಾಮರಸ್ಯ ಪಡೆದ ಶರಣರು ಮಾತ್ರ ಎನ್ನುತ್ತಾರೆ ಸಿದ್ಧರಾಮರು. ಸಂಶಯದ ಶೃಂಖಲೆಗಳನ್ನೆಲ್ಲ ಜ್ಞಾನದ ಅಗ್ನಿಯಿಂದ ಸುಟ್ಟು, ಮುಕ್ತಿಯ ಹಂಗನ್ನು ಅರಿವಿನ ಬಂಧದಲ್ಲಿರಿಸುವಂತೆ ಮಾಡಿದ ತನ್ನ ಗುರು. ಅರಿವು ಉಂಟಾದಾಗ ಮುಕ್ತಿಯ ಹಂಗು ಅಥವಾ ಅದರ ಅವಶ್ಯಕತೆಯಿರುವುದಿಲ್ಲ. ಆದ್ದರಿಂದ ಅದು ಅರಿವಿನ ಬಂಧದಲ್ಲಿದೆ ಎನ್ನುತ್ತಾರೆ. ಆ ಗುರು ಕೇವಲ ಚೆನ್ನಬಸವಣ್ಣನಲ್ಲದೆ ಬೇರಾರೂ ಅಲ್ಲ ಎಂದು ತಮ್ಮ ಗುರುವನ್ನು ನೆನೆಯುತ್ತಾರೆ.


ಸ್ಥಾವರ ಲಿಂಗಾರಾಧನೆಯಲ್ಲಿ ಮತ್ತು ಲೋಕೋದ್ಧಾರದ ಕನಸಿನಲ್ಲಿ ದಿನಗಳನ್ನು ಕಳೆಯುತ್ತಿದ್ದ ಸಿದ್ಧರಾಮನಿಗೆ ಅಲ್ಲಮರು ಪ್ರಮಥರ ಶಿವಯೋಗದ ರಹಸ್ಯವನ್ನು ತೋರಿಸಲು ಕಲ್ಯಾಣಕ್ಕೆ ಕರೆತರುತ್ತಾರೆ. ಅಲ್ಲಿ ಚೆನ್ನಬಸವಣ್ಣನವರಿಂದ ಅವರಿಗೆ ದೀಕ್ಷೆಯಾಗುತ್ತದೆ. ಅವರ ಭ್ರಮೆಗಳು ಕಳಚಿಹೋಗುತ್ತವೆ. ಅವರು ತಮ್ಮ ಸಾಧನೆಯ ಸಮಯದಲ್ಲಿ ನಾನಾ ತರಹದ ಗುರುಗಳನ್ನು ಕಂಡಿರಬಹುದು. ಆದರೆ ಚೆನ್ನಬಸವಣ್ಣನವರನ್ನು ಮತ್ತು ಇತರ ಶರಣರನ್ನು ಕಂಡ ಮೇಲೆ ಅವರಿಗೆ ನಿಜವಾದ ಗುರು ಯಾರೆಂಬುದು ತಿಳಿದದ್ದಕ್ಕೆ ಈ ವಚನವೇ ಸಾಕ್ಷಿ.

Friday, April 13, 2012

Vachana 85: Guruvingu Shishyangu – You are your teacher!


ಗುರುವಿಂಗೂ ಶಿಷ್ಯಂಗೂ ಆವುದು ದೂರ? ಆವುದು ಸಾರೆ? ಎಂಬುದನು ಆರು ಬಲ್ಲರು?
ಗುರುವೇ ಶಿಷ್ಯನಾದ ತನ್ನ ವಿನೋದಕ್ಕೆ, ಶಿಷ್ಯನೇ ಗುರುವಾದ ತನ್ನ ವಿನೋದಕ್ಕೆ.
ಕರ್ಮವೆಂಬ ಕೌಟಿಲ್ಯ ಎಡೆವೊಕ್ಕ ಕಾರಣ ಭಿನ್ನವಾಗಿ ಇದ್ದಿತ್ತೆಂದಡೆ, ಅದು ನಿಶ್ಚಯವಹುದೆ?
ಆದಿ ಅನಾದಿಯಿಂದತ್ತತ್ತ ಮುನ್ನಲಾದ ಪರತತ್ವಂ ತಿಳಿದು ನೋಡಲು,
ನೀನೇ ಸ್ವಯಂ ಜ್ಯೋತಿಪ್ರಕಾಶವೆಂದರಿಯಲು,
ನಿನಗೆ ನೀನೆ ಗುರುವಲ್ಲದೆ ನಿನ್ನಿಂದಧಿಕವಪ್ಪ ಗುರುವುಂಟೆ?
ಇದುಕಾರಣ ಗುಹೇಶ್ವರಲಿಂಗ ತಾನೇ ಎಂಬುದನು ತನ್ನಿಂದ ತಾನೇ ಅರಿಯಬೇಕು ನೋಡಾ.

TRANSLITERATION

guruviMgU shiShyaMgU aavudu doora? Aavudu saare?  eMbudanu aaru ballaru?
guruvE shiShyanaada tanna vinOdakke, shiShyanE guruvaada tanna vinOdakke.
karmaveMba kouTilya eDevokka kaaraNa bhinnavaagidditeMdaDe,
adu nishcayavahude?
Aadi anaadiyiMdattatta munnalaada paratatvaM tiLidu nODalu,
nInE svayaM jyOtiprakaashaveMdariyalu,
ninage nInE guruvallade ninniMdadhikavappa guruvuMTe?
idukaaraNa guhEshvaraliMga taanE eMbudanu tanniMda taanE ariyabEku nODaa

CLICK HERE TO READ-ALONG:


TRANSLATION (WORDS)
 
guruviMgU (to the guru, to the teacher) shiShyaMgU-(and to the disciple-)
aavudu (which is ) doora? (far?) Aavudu (which is ) saare?( near?)  eMbudanu (that which is asked) aaru (who) ballaru?(knows?)
guruvE (teacher himself)shiShyanaada(became disciple) tanna (his own) vinOdakke, (pleasure) shiShyanE (the disciple himself) guruvaada (became teacher)tanna(his own) vinOdakke.(pleasure)
karma(action) veMba (which is )kouTilya(hypocracy, deceit) eDevokka( has entered  the mind) kaaraNa (for the reason)bhinnavaagidditeMdaDe,(if seems different)
adu (it) nishcayavahude? ( is it for sure?)
Aadi (beginning) anaadi (without beginning ) yiMdattatta (beyond) munnalaada (which existed before) paratatvaM (the ultimate) tiLidu (understanding, comprehending) nODalu,(if seen)
nInE (you alone)svayaM (your self) jyOtiprakaashavu (bright light) eMdariyalu,(if understood) ninage(to yourself) nInE(you alone) guruvallade (if not the teacher)ninniMda (to you) adhikavappa(superior ) guruvuMTe?(is there a teacher)
idukaaraNa(for this reason) guhEshvaraliMga (Guheshvara linga)taanE(oneself) eMbudanu(which is)
tanniMda(from oneself) taanE (one) ariyabEku(should understand) nODaa.(you see.)

TRANSLATION

Who knows how far apart or how close are the teacher and the disciple?
The teacher became the disciple for his pleasure, and the disciple became the teacher for his pleasure!
Deceived by the materialistic activity, if the teacher and disciple appear to be different, can it be for sure?
To really comprehend the Ultimate which existed before the idea of beginning and without beginning came in to being,
To realize that you yourself  is that ever shining illumination,
You have to be your own teacher, there is no other superior guru.
As such, you yourself have to realize that you are the Guhesvara Linga, you see!

COMMENTARY

Our previous postings mention that a guru (teacher) is needed to get one started on the spiritual path for self-realization. We have also said that when an intense desire arises in the disciple, a guru appears, meaning that disciple must be ready to receive the knowledge. An intense desire to do so is a must. Allama Prabhu expands on the concept of guru further in this Vachana. He says who knows how far apart or close the guru and disciple are, essentially leading to the thought that the two are one and the same.  Guru becomes a disciple for his pleasure and the disciple becomes guru for his pleasure. What is the significance of this paradox?  An individual with a kindled intense desire to learn becomes a disciple, while the individual on gaining the knowledge becomes a guru. Ignorance can be considered as the characteristic of the disciple. When he realizes his state of ignorance, he might look for a guru to guide him. Even after such guidance is provided, the disciple continues to be ignorant unless he is willing to shine the light on the recently gained knowledge by himself. Neither the guru nor others around him are of any help in this regard. He himself has to become his guru. Allama Prabhu says that we tend to distinguish guru and disciple as separate because of the ignorance covering us due to the mundane materialistic activities we are involved in. If we can emerge from the grip of this ignorance, we realize that the only guru we have and need are ourselves. It is interesting that Allama prabhu concludes the Vachana saying that one has to see that he/she and the God (Guhesvara Linga) are one and he/she has to realize it by himself/herself.

In summary, a guru is essential to guide us in the right path. An intense desire and awareness is a must to seek and find such guru. Even after receiving the knowledge from a guru, internalizing it and seeing the divine through this enhanced awareness is still the responsibility of the individual. No one else can give one such power. Finally, the Lord and the individual are one and the same, there is no duality or separation. When the awareness heightens, the unity of jeevatma and paramatma becomes obvious.

Let us find the guru in us!

KANNADA COMMENTARY

ಅಲ್ಲಮಪ್ರಭುಗಳು ಈ ವಚನದಲ್ಲಿ ಗುರು ಎಂದರೆ ಯಾರು ಎಂಬುದನ್ನು ವಿವರವಾಗಿ ತಿಳಿಸಿ ಹೇಳುತ್ತಿದ್ದಾರೆ. ಗುರು ಮತ್ತು ಶಿಷ್ಯ ಇಬ್ಬರೂ ಬೇರೆ ಬೇರೆಯೆ? ಇವರಲ್ಲಿ ಯಾರು ಹತ್ತಿರದವರು ಯಾರು ದೂರದವರು? ಎಂಬುದನ್ನು ಯಾರು ಹೇಳಬಲ್ಲರು?ಎಂದು ಕೇಳುತ್ತಾರೆ. ಏಕೆಂದರೆ ಅವರಿಬ್ಬರೂ ಭಿನ್ನವಲ್ಲವೆಂಬುದು ಅವರ ಅಂಬೋಣ.  ಗುರುವೇ ತನ್ನ ವಿನೋದಕ್ಕೆ ಶಿಷ್ಯನಾಗುತ್ತಾನೆ ಮತ್ತು ತನ್ನ ವಿನೋದಕ್ಕೆ ಗುರುವೂ ಆಗುತ್ತಾನೆ ಎನ್ನುತ್ತಾರೆ.ಈ ಸೋಜಿಗವನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಏನು ಹಾಗೆಂದರೆ? ವ್ಯಕ್ತಿಯು ತಾನು ತಿಳಿದುಕೊಳ್ಳಬೇಕೆನಿಸಿದಾಗ ಶಿಷ್ಯನಾಗುತ್ತಾನೆ, ತಿಳಿದುಕೊಂಡಾಗ ತಾನೇ ಗುರುವಾಗುತ್ತಾನೆ. ಅಜ್ಞಾನ ಶಿಷ್ಯನ ಲಕ್ಷಣವೆನ್ನಬಹುದು. ಆಗ ಆತನು ಹೊರಗಣ ಗುರುವನ್ನು ಅರಸುತ್ತ ಹೋಗುತ್ತಾನೆ. ಯಾರೋ ಒಬ್ಬ ದಾರಿಯನ್ನು ಸೂಚಿಸಬಹುದು. ಆದರೆ ಅದರಿಂದ ಅರಿವು ಉಂಟಾಗುವುದಿಲ್ಲ. ತನಗೆ ತಾನೇ ಬೆಳಕಾದಾಗ ಮಾತ್ರ ಅರಿವು ಉಂಟಾಗುತ್ತದೆ.  ಆದ್ದರಿಂದ ತನಗೆ ತಾನೇ ಗುರು ತನಗೆ ತಾನೇ ಶಿಷ್ಯನೆಂದು ಹೇಳುತ್ತಾರೆ ಅಲ್ಲಮ ಪ್ರಭುಗಳು. ಹಾಗಾದರೆ “ಗುರು”  “ಶಿಷ್ಯ” ಎಂದು ಏಕೆ ಹೇಳುವರು? “ಕರ್ಮ ಕೌಟಿಲ್ಯ ಎಡೆವೊಕ್ಕ ಕಾರಣ ಭಿನ್ನವಾಗಿದ್ದಿತೆಂದೆಡೆ” ಎಂದರೆ  ನಮ್ಮ ಮನದಲ್ಲಿ ಕರ್ಮದ ಮೋಸ ಮನೆ ಮಾಡಿರುವುದರಿಂದ  ಅವರಿಬ್ಬರೂ ಬೇರೆ ಬೇರೆಯಾಗಿ ಕಾಣುತ್ತಾರೆ. ನಮ್ಮ ಕರ್ಮವೇ,  ನಮಗೆ ಮೋಸ ಮಾಡುತ್ತದೆ. ಇಲ್ಲಿ “ಕರ್ಮ” ವೆಂದರೆ   ನಾವು ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮವೆಂದರ್ಥವಲ್ಲ. ಶರಣರು ಅಂತಹ ಕರ್ಮವನ್ನು ಒಪ್ಪಿದವರಲ್ಲ. ಇಲ್ಲಿ ಅವರ ಅರ್ಥವೇ ಬೇರೆಯಾಗಿದೆ. ಪ್ರತಿಯೊಬ್ಬನಿಗೂ ತನ್ನ ಗುರು ತಾನೇ ಆಗುವ ಅವಕಾಶವಿದ್ದೇ ಇದೆ. ತನ್ನಲ್ಲಿ ಅರಿವಿಗಾಗಿ ಆಳವಾದ ಹಂಬಲವಿದ್ದಾಗ ಅರಿವು ತಾನಾಗಿಯೇ ಒಲಿಯುತ್ತದೆ.  ಆದರೆ ತನ್ನ  ಅಜ್ಞಾನದಿಂದಾಗಿ, ತನ್ನಲ್ಲಿ ಅರಿಯುವ ಆಳವಾದ ಹಂಬಲವಿಲ್ಲದ್ದರಿಂದಾಗಿ, ಅನೇಕ ಗೊಂದಲಗಳಲ್ಲಿ ಸಿಕ್ಕಿಕೊಂಡಿರುವುದರಿಂದ  ತಾನು ಅಜ್ಞಾನದಲ್ಲಿ ಮುಳುಗಿರುತ್ತಾನೆ. ಈ ರೀತಿಯಾಗಿ ತಾನೇ ತನ್ನ ಮೋಸಕ್ಕೆ ಒಳಗಾಗುತ್ತಾನೆ ವ್ಯಕ್ತಿ. ತನ್ನದೇ ಕುಟಿಲತೆಗೆ ಒಳಗಾಗುತ್ತಾನೆ. ಹೊರಗಣ ಗುರುವನ್ನು ಅರಸಲು  ಹೊರಡುತ್ತಾನೆ.  ಹೀಗಾಗಿ ಗುರು ಮತ್ತು ಶಿಷ್ಯರು ಬೇರೆ ಬೇರೆಯಾಗಿ  ತೋರುತ್ತಾರೆ. ಇದು ತಾನೇ ಮಾಡಿಕೊಂಡ ಮೋಸ.ಅಥವಾ ತನ್ನನ್ನು ಆ ಸ್ಥಿತಿಯಲ್ಲಿ ಇರಲು ಅವಕಾಶಮಾಡಿಕೊಡುವ ಮೂಲಕ ತನಗೆ ತಾನೇ ಮಾಡಿಕೊಂಡ ಮೋಸ.  ಕರ್ಮ ಕೌಟಿಲ್ಯ. ಈ ಕಾರಣಕ್ಕಾಗಿ  ಗುರು ಮತ್ತು ಶಿಷ್ಯರು ಭಿನ್ನ ಭಿನ್ನರಾಗಿ ಕಾಣುತ್ತಾರೆ. ಹಾಗೆಂದಮಾತ್ರಕ್ಕೆ ಅವರು  ಭಿನ್ನ ಎಂದು ನಿಶ್ಚಯಿಸುವುದು ಸರಿಯೆ? ಎಂದು ಕೇಳುತ್ತಾರೆ ಅಲ್ಲಮರು.

ಆದಿ ಮತ್ತು ಅನಾದಿಯನ್ನು ಮೀರಿದ, ಅದಕ್ಕಿಂತಲೂ ಮುನ್ನಿನ, ಆದಿ ಅನಾದಿ ಎಂಬ ವಿಚಾರವು ಹುಟ್ಟುವುದಿಕ್ಕಿಂತ ಮುನ್ನ ಇದ್ದ  ಪರತತ್ವವನ್ನು ತಿಳಿದು ನೋಡಲು ತಾನೇ ಸ್ವಯಂ ಜ್ಯೋತಿ ಎಂಬ ಅರಿವು ಮೂಡುತ್ತದೆ. ಅದನ್ನು ತಿಳಿದುಕೊಂಡಾಗ ತನಗೆ ತಾನೇ ಗುರುವಲ್ಲದೆ ತನಗಿಂತ ಹೆಚ್ಚಿನ ಬೇರೆ ಗುರು ಇರುವುದಿಲ್ಲ. ಆದ್ದರಿಂದ ತನಗೆ ತಾನೇ ಗುರುವೆಂಬುದನ್ನು ತಾನೇ ಅರಿಯಬೇಕು. ಆ ಅರಿವು ಕೂಡ ಇತರರಿಂದ ಬರಲು ಸಾಧ್ಯವಿಲ್ಲ. ಎಂದು ಹೇಳುತ್ತಾರೆ ಅಲ್ಲಮಪ್ರಭುಗಳು.

Friday, April 6, 2012

Vachana 84: Ayyaa nararoLu huTTi - From Ignorance to Awareness


ಅಯ್ಯಾ ನರರೊಳು ಹುಟ್ಟಿ, ಮರಹಿನೊಳಗೆ ಬಿದ್ದವಳ ತಂದು
ಮಹಾಶರಣರು ಎನಗೆ ಕುರುಹ ತೋರಿದರು.
ಗುರುವೆಂಬುದನರುಹಿದರು, ಜಂಗಮವೆ ಜಗದ ಕರ್ತುವೆಂದರುಹಿದರು.
ಅವರ ನೆಲೆವಿಡಿದು ಮನವ ನಿಲಿಸಿದೆ, ಕಾಯ ಜೀವವೆಂಬುದನರಿದೆ,
ಭವ ಬಂಧನವ ಹರಿದೆ, ಮನವ ನಿರ್ಮಲ ಮಾಡಿದೆ.
ಬೆಳಗಿದ ದರ್ಪಣದಂತೆ  ಚಿತ್ತ ಶುದ್ಧವಾದಲ್ಲಿ,
ನೀವು ಅಚ್ಚೊತ್ತಿದ್ದ ಕಾರಣದಿಂದ ನಿಮ್ಮ ಪಾದವಿಡಿದು
ನಾನು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ

TRANSLITERATION


Ayyaa nararoLu huTTi, marahinoLage biddavaLa taMdu
mahaasharaNaru enage kuruha tOridaru
guruveMbudanaruhidaru, jaMgamave jagada kartuveMdaruhidaru.
Avara  neleviDidu manava niliside, kaaya jIvaveMbudanaride.
Bhava baMdhanava haride, manava nirmala maaDide.
beLagida darpqaNadaMte citta shuddhavaadalli,
nIvu accottidda kaaraNadiMda nimma paadaviDidu
naanu nijamuktaLaadenayyaa appaNNapriya cennabasavaNNa

CLICK HERE TO READ-ALONG:

http://www.youtube.com/watch?v=sJoQ7CAh_zM

TRANSLATION (WORDS)

Ayyaa (sir) nararoLu (among humans)  huTTi (born), marahinoLage (in ignorance) biddavaLa (lying) taMdu (brought)
mahaasharaNaru (great sharaNaas) enage (to me) kuruha ( the symbol of god) tOridaru (showed)
guruvu (guru) eMbudanu (what is) aruhidaru,(revealed) jaMgamave (jaMgama alone) jagada (of the world) kartuveMdu (maker) aruhidaru.(revealed)
Avara (their) neleviDidu ( holding  feet) manava (my mind) niliside (established, I put in place) kaaya (body) jIvavu (life) eMbudanu (what is) aride.( I understood)
Bhava(worldly) baMdhanava(ties, bondage) haride,(I tore) manava ( the mind) nirmala (pure) maaDide.( I made)
beLagida(polished) darpaNadaMte(like a mirror)  citta  (mind) shuddhavaadalli,(when it is pure)
nIvu(you) accottidda( were imprinted) kaaraNadiMda(for the reason) nimma (your) paadava (feet) iDidu (holding) 
naanu (I)  nijamuktaLaadenayyaa (became completely free) appaNNapriya cennabasavaNNa (Appanna priya Chennabasavanna)

TRANSLATION

Dear Sirs! Having born among ordinary humans, I had fallen in ignorance!
The great Sharanaas showed me the symbol of (way to) God.
They revealed the concept of guru, they revealed that Jangama alone is the maker of the World  
Holding their feet, I established my mind, I understood the body and the soul,
I tore the bondages of the world and purified my mind.
As the mind became clear as a polished mirror,
with Your abstraction imprinted on it,  I held on to it and  
became completely (truly) free, Oh! Appanna priya Chennabasavanna!

COMMENTARY

In this Vachana, Sharane Hadapada Lingamma traces her path from ignorance to enlightenment. She says that having born among ordinary (common) people, she was drowned in the sea of ignorance. Shranaas revealed her the symbol of enlightenment. They showed the concept of guru and impressed that this world is made by jangama alone. With these concepts understood, Lingamma says that she established her mind in that bliss, understood the meaning and purpose of body and soul, tore up the worldly bondages and purified her mind. With that clear mind on which the God concept was impressed, she held on to it and became truly free.


This Vachana provides the roadmap for self-realization or becoming truly free. Having born among common humans, we are all occupied by our routine worldly activities and seldom find time or  develop an inclination to seek the true freedom. Sharanaas urged us to get away from that ignorant mode through the concepts of Guru and Jangama.  The  word ‘Guru’ stands for the one who erases ignorance.  We immediately associate Guru to an individual preferably with yellow robes, always quoting slokas and mantras. Lingamma takes us away from this thinking saying that sharanaas showed her ‘what is Guru’ i.e. the concept of guru not an individual guru. The keen desire and awareness needed to move from ignorance to enlightenment is the conceptual guru. Along the same lines, Jangama is equated to a wandering ascetic who has given up his worldly possessions and has devoted himself to enhancing God awareness among the common men. Lingamma says that the Sharanaas impressed on her that Jangama alone is the maker of the world. Jangama stands for ‘mobile, dynamic,  non-static’ implying that nothing in this world is static or permanent except the true awareness. With the concepts of guru and jangama in hand, Lingamma could tear up the worldly bondages, could understand the true meaning and purpose of body and soul (Jeevaatma) and achieved the true freedom. With this roadmap we all can reach the heights Lingamma reached starting from her beginnings as an ignorant individual.


Let us invite the conceptual guru and jangama into our lives!

KANNADA COMMENTARY

ಈ ವಚನದಲ್ಲಿ, ತಾನು,  ಮರೆವಿನ ಸ್ಥಿತಿಯಿಂದ ಅರಿವಿನ ಸ್ಥಿತಿಗೆ ಬಂದ ಬಗೆಯನ್ನು ತಿಳಿಸುತ್ತಿದ್ದಾಳೆ ಹಡಪದ ಲಿಂಗಮ್ಮ. ತಾನು ಸಾಮಾನ್ಯ ನರಜನ್ಮ ಪಡೆದು ಮರೆವಿನಲ್ಲಿ ಮುಳುಗಿದ್ದೆ ಎಂದು ಹೇಳುತ್ತಾಳೆ.  ಅಂತಹ ಅಜ್ಞಾನದ ಸ್ಥಿತಿಯಲ್ಲಿದ್ದವಳನ್ನು ಕರೆತಂದು ಶರಣರು ಅರಿವಿನ ಕುರುಹ ( symbol)ನ್ನು ತೋರಿದರು, ಗುರು ಎಂದರೇನು ಎಂಬುದನ್ನು ತಿಳಿಸಿದರು, ಈ ಜಗತ್ತನ್ನು ಮಾಡಿರುವುದೇ ಜಂಗಮದಿಂದ ಎಂಬುದನ್ನು ತಿಳಿಯುವಂತೆ ಮಾಡಿದರು. ಗುರು ಮತ್ತು ಜಂಗಮದ ನೆಲೆಯನ್ನು ಹಿಡಿದು ಅಲ್ಲಿ ಮನವನ್ನು ನಿಲ್ಲಿಸಿದೆ, ಕಾಯವೆಂದರೇನು ಜೀವ ವೆಂದರೇನು ಎಂಬುದನ್ನು ಅರಿತುಕೊಂಡೆ. ಆ ಕಾರಣ ಭವ ಬಂಧನವನ್ನು ಹರಿದೆ, ಮನವನ್ನು ನಿರ್ಮಲಗೊಳಿಸಿದೆ. ಮನಸ್ಸು ಬೆಳಗಿದ ಕನ್ನಡಿಯಂತೆ ಶುದ್ಧವಾದಾಗ ಅಲ್ಲಿ  ಪರತತ್ವ ಅಚ್ಚೊತ್ತಿದಂತೆ  ಇದ್ದ ಕಾರಣ ಅದನ್ನು ಹಿಡಿದು ತಾನು ಮುಕ್ತಳಾದೆ ಎನ್ನುತ್ತಾಳೆ.

ಲಿಂಗಮ್ಮ ಕೆಳಜಾತಿಯಲ್ಲಿ ಹುಟ್ಟಿದವಳು. ಆದರೆ ಅವಳು ಬೆಳೆದ ರೀತಿ ಅದ್ಭುತವಾದದ್ದು, ಅವಳು ಅಧ್ಯಾತ್ಮದಲ್ಲಿ  ಪಡೆದ ಸ್ಥಾನ ಅತ್ಯುನ್ನತ ಮಟ್ಟದ್ದು. ಅದು ನಡೆದದ್ದು ಹೇಗೆ? ಮರವೆ ಆವರಿಸಿ ಸಂಸಾರದಲ್ಲಿ ಮುಳುಗಿರುವ ಸಾಮಾನ್ಯ ಮಾನವಳಾಗಿ ಹುಟ್ಟಿದವಳು ಲಿಂಗಮ್ಮ. ಆದರೆ  ಮಹಾಶರಣರು ಆಕೆಗೆ ಪರತತ್ವದ ಕುರುಹು ತೋರಿದರು. ಕುರುಹನ್ನು ತೋರಿದರೆ ಕೆಲಸ ಮುಗಿಯಲಿಲ್ಲ. ಏಕೆಂದರೆ ಕುರುಹೇ ಅಂತಿಮವಲ್ಲ. ಅಲ್ಲಿಂದ ನಿಜಮುಕ್ತಿಯ ದಾರಿ ಬಹುದೂರ. ಕುರುಹೇ ನಿಜವೆಂದು ಮೌಢ್ಯಕ್ಕೆ ಒಳಗಾಗುವುದು ಸಾಮಾನ್ಯ. ನಾವು ಇಂದು ಅದನ್ನು ಎಲ್ಲೆಲ್ಲೂ ನೋಡುತ್ತೇವೆ. ದೇವರ ಕುರುಹೆಂದು ಸ್ಥಾಪಿಸಿದ ದೇವರ ಮೂರ್ತಿಯನ್ನೇ ನಿಜವಾದ ದೇವರೆಂದು ಪೂಜಿಸುವುದರಲ್ಲಿಯೇ ತಮ್ಮ ಇಡೀ ಬದುಕನ್ನೇ ಕಳೆಯುತ್ತಾರೆ ಜನರು. ಅದು ಸಮಾನ್ಯ ನರರ ರೀತಿ. ಆದರೆ ಶರಣರು ಲಿಂಗಮ್ಮನನ್ನು ಅಲ್ಲಿಗೆ ಬಿಡಲಿಲ್ಲ. ಶರಣರು “ಗುರುವೆಂಬುದನ್ನರುಹಿದರು” ಎನ್ನುತ್ತಾಳೆ ಆಕೆ. ಇಲ್ಲಿ ಆಕೆ ಬಳಸಿದ  “ಗುರುವೆಂಬುದನ್ನು” ಎಂಬ ಪದವನ್ನು ಗಮನಿಸುವುದು ಬಹು ಮುಖ್ಯ.  ಆಕೆ ಬಳಸಿದ ಪದ ವ್ಯಕ್ತಿವಾಚಕವಲ್ಲ. ಆಕೆ ಗುರುವನ್ನು ಎನ್ನಲಿಲ್ಲ. ಏಕೆಂದರೆ ಗುರು ಎಂದ ತಕ್ಷಣ ಎಲ್ಲರ ಮನದಲ್ಲಿ  ಮಠಾಧಿಪತಿಯದೋ, ಕಾವಿಧಾರಿಯದೋ, ಗಡ್ಡಧಾರಿಯದೋ, ಸಂನ್ಯಾಸಿಯದೋ, ಗುಹಾವಾಸಿಯದೋ ಚಿತ್ರ ಮೂಡುತ್ತದೆ.  ಆದ್ದರಂದ ಆಕೆ  “ಗುರುವೆಂಬುದನ್ನು” ಎನ್ನುತ್ತಾಳೆ. ಎಂದರೆ ಗುರು ಎನ್ನುವ ತತ್ವವನ್ನು  ತಿಳಿಸಿದರು ಎಂದರ್ಥ. “ಗುರು” ಎಂದರೆ ಮಹಾನ್ ಎಂದೂ, ಕತ್ತಲೆಯನ್ನು ಕಳೆಯುವವ ಎಂದೂ ಅರ್ಥಗಳಿವೆ. ಕತ್ತಲೆ ಅಥವಾ ಅಜ್ಞಾನದಲ್ಲಿ ಮುಳುಗಿದವನನ್ನು ಬೆಳಕಿನೆಡೆಗೆ ಕರೆದೊಯ್ಯುವ ತತ್ವ ಗುರು. ಮೊದಲು ಆ ತತ್ವ ವ್ಯಕ್ತಿಯ ರೂಪದಲ್ಲಿ ತೋರಬಹುದು, ಆದರೆ ಅದು ಆ ವ್ಯಕ್ತಿಯೇ ಅಲ್ಲ.   ಗುರು ತತ್ವವನ್ನು ಅರಿತುಕೊಳ್ಳಬೇಕೇ ಹೊರತು ಒಬ್ಬ ವ್ಯಕ್ತಿಯನ್ನು ಗುರುವೆಂದು ಪೂಜಿಸುವುದಲ್ಲ. ಹಾಗೆ ವ್ಯಕ್ತಿಯನ್ನು ಗುರುವೆಂದು ಪೂಜಿಸಿ, ನಿಂತ ನೀರಾಗುವುದು ಸಾಮಾನ್ಯ ನರನ ರೀತಿ. ಶರಣರ ಕರುಣೆಯಿಂದ ತಾನು ಸಾಮಾನ್ಯ ನರನ ಸ್ಥಿತಿಯಿಂದ ಮೇಲೆದ್ದೆ ಎನ್ನುತ್ತಾಳೆ ಲಿಂಗಮ್ಮ.ಇಷ್ಟೇ ಅಲ್ಲ ಶರಣರು “ಜಂಗಮವೆ ಜಗದ ಕರ್ತುವೆಂದರುಹಿದರು” ಜಂಗಮವೇ ಜಗತ್ತಿನ ಕರ್ತೃ ಎಂಬುದನ್ನೂ ಅರುಹಿದರು ಎನ್ನುತ್ತಾಳೆ. ಈ ಜಗತ್ತು ಚೈತನ್ಯಯುಕ್ತವಾದದ್ದು. ಸದಾ ಚಲನಶೀಲವಾದದ್ದು, ಇಲ್ಲಿ ಯವುದೂ ಶಾಶ್ವತವಲ್ಲ. ಎಂಬಂತಹ ಅರಿವನ್ನುಂಟುಮಾಡಿದರು ಶರಣರು ಎನ್ನುತ್ತಾಳೆ. ಇಲ್ಲಿಯೂ ಕೂಡ ಜಂಗಮವೆಂದರೆ ಸಾಮನ್ಯರ ಗ್ರಹಿಕೆ ಬಹಳ ಸೀಮಿತವಾದದ್ದು. ವಿಭೂತಿ, ರುದ್ರಾಕ್ಷಿಧಾರಿಗಳನ್ನು ಮಾತ್ರ ಜಂಗಮರೆನ್ನುವ ಪರಿಪಾಠವಿದೆ. ಲಿಂಗಮ್ಮ ಅದನ್ನು ವ್ಯಕ್ತಿಗೆ ಸೀಮಿತಗೊಳಿಸಿಲ್ಲ. ಜಂಗಮ ಒಂದು ತತ್ವ. ಅದು ಚೈತನ್ಯ ತತ್ವ. ಗುರು ಮತ್ತು ಜಂಗಮ ತತ್ವಗಳು ಅಮೂರ್ತ (abstract) ವಾದವುಗಳು. ಮೊದಲು ಕುರುಹನ್ನು ಕೊಟ್ಟು ನಂತರ ಅದರ ಮೂಲಕ ಅಮೂರ್ತ ತತ್ವವನ್ನು ತಿಳಿಸಿದರು ಶರಣರು. ಅವರು ತಿಳಿಸಿದ ತತ್ವವನ್ನು ಹಿಡಿದು, ಆ ತತ್ವಗಳಲ್ಲಿ ಮನವನ್ನು ನಿಲ್ಲಿಸಿ ಕಾಯ ಮತ್ತು ಜೀವಗಳನ್ನು ಅರ್ಥಮಾಡಿಕೊಂಡೆ ಎನ್ನುತ್ತಾಳೆ. ಕಾಯದ ಮತ್ತು ಜೀವದ ಇತಿಮಿತಿಗಳೇನು? ಗುಣಗಳೇನು? ಅವುಗಳ ಸ್ಥಾನವೇನು? ಎಂಬುದಲ್ಲದೆ ಅವುಗಳ ನಶ್ವರತೆಯನ್ನು ಅರಿತುಕೊಂಡಳು. ಇದರಿಂದ ಅಪ್ರಯತ್ನವಾಗಿಯೇ ಅವುಗಳ ಬಗ್ಗೆ ವೈರಾಗ್ಯ ಉಂಟಾಯಿತು. ತನುಗುಣಗಳು ಅಳಿದು ಹೋದವು. ಭವ ಬಂಧನ ಹರಿದು ಹೋಯಿತು. ಮಾಯೆಯೆಲ್ಲ ಅಳಿಸಿಹೋಗಿ ಮನಸ್ಸು ನಿರ್ಮಲವಾಯಿತು. ಅದು ಬೆಳಗಿದ ಕನ್ನಡಿಯಂತೆ ಉಜ್ಜ್ವಲವಾಯಿತು. ಆಗ ಅಲ್ಲಿ ಪರಮಾತ್ಮನ ಸ್ವರೂಪ ಅಚ್ಚೊತ್ತಿದಂತುಳಿಯಿತು ಆ ಒಂದನ್ನುಳಿದು ಬೇರೆಯದೆಲ್ಲ ನಿರ್ನಾಮವಾಯಿತು. ಆ ಪರತತ್ವದ  ಪಾದಗಳನ್ನು ಹಿಡಿದು ತಾನು ಪೂರ್ಣರೂಪದಿಂದ ಮುಕ್ತಳಾದೆ ಎನ್ನುತ್ತಾಳೆ  ಹಡಪದ ಲಿಂಗಮ್ಮ. ಇಲ್ಲಿಯೂ ಕೂಡ ಆಕೆ ದೇವರೆಂಬ ಪದವನ್ನೇ ಬಳಸಿಲ್ಲ. ಆ ಅಮೂರ್ತನನ್ನು  ತಿಳಿದುಕೊಳ್ಳುವುದನ್ನು ನಮಗೇ ಬಿಟ್ಟಿದ್ದಾಳೆ ಲಿಂಗಮ್ಮ. ಇದು ಸಾಮಾನ್ಯಳಾಗಿ ಹುಟ್ಟಿ ಆಕೆ ಮುಟ್ಟಿದ ಎತ್ತರ.