ಅನ್ಯರ ರಜವ ಸೋಂಕದೆ, ತನ್ನ ರಜವ ಬಾಧಿಸದೆ
ರವಿಯ ಬೆಳಸ ಬಳಸದೆ, ಲಿಂಗದ ಬೆಳಸ ತಂದು
ಜಂಗಮಕ್ಕೆ ಸವೆಸುತ್ತಿಪ್ಪ ಲಿಂಗ ಭಕ್ತ
ಆ ಭಕ್ತನಲ್ಲಿ ಗುಹೇಶ್ವರಲಿಂಗನಿಪ್ಪನು
TRANSLITERATION
Anyara rajava sOMkade, tanna rajava baadhisade
Raviya beLasa baLasade liMgada beLasa taMdujaMgamakke savesuttippa linga bhakta
aa bhaktanalli guEshvaraliMganippanu
CLICK HERE TO READ-ALONG:
http://youtu.be/q8MZF09uQog
TRANSLATION (WORDS)
Anyara (other’s) rajava (wealth,riches) sOMkade, (without touching) tanna (one’s own) rajava(the body) baadhisade ( not troubling)
Raviya(of sun, of nature) beLasa (crop,produce) baLasade (not using)liMgada (of God) beLasa(produce) taMdu (bringing)jaMgamakke (for jangama) savesuttippa(spending, using) linga bhakta (devotee)
aa (that) bhaktanalli (in devotee) guEshvaraliMganippanu (is God Guheshvara)
Without touching other’s wealth, without troubling his own body,
without using the produce of the Sun (nature), bringing the produce of the God,the devotee is offering it to the service of Jangama (wandering ascetic).
God Guheshvara Linga is in that devotee!
COMMENTARY
In this Vachana Allama Prabhu speaks on how we should treat the natural resources as precious gifts from God and stay away from greed, mindless usage of these resources and consumerism. Although spoken hundreds of years ago, these words are equally applicable to today’s society. One should not be after the wealth of others (the wealth of fellow beings and the natural resources provided by God, in general). One should not pollute the precious body given by the Lord with excessive indulgence and lusting for more. One should treat all natural resources as precious and refrain from mindless consumerism. One should treat them as the wealth of God and earn the right to use them through honest, selfless effort (kaayaka). One should utilize the minimum needed and offer the rest (daasoha) to the service of God through wandering ascetics. Such is the nature of the true devotee. Allama Prabhu says that Lord Guhesvara resides in that devotee!
The first verse of Ishavasya Upanishad:
Ishavaasyam idam sarvam yathkincha jagatyaam jagat
tEna thekyEna bhunjithA mA grudhah kasyasviddanam
Every aspect of this changing Universe is His!
Use it with utmost caution and do not greed for other’s wealth!
KANNADA COMMENTARY
ತನ್ನ ಆಸೆಬುರುಕುತನ, ಬೇಕಾಬಿಟ್ಟಿ ಬಳಸಿ ಬೀಸಾಡುವ ಅಭ್ಯಾಸ, (mindless usage of disposable things ) ಕೊಳ್ಳುಬಾಕತನ (consumerism) ಇತ್ಯಾದಿ ಗುಣಗಳಿಂದ, ಇಡೀ ಪ್ರಪಂಚವನ್ನೇ ನಾಶದ ಅಂಚಿಗೆ ಕೊಂಡೊಯ್ಯುತ್ತಿರುವ ಮಾನವನಿಗೆ ಪ್ರತಿಯೊಂದು ವಸ್ತುವಿನ ಬಗ್ಗೆ ಅತ್ಯಗತ್ಯವಾಗಿ ಇರಬೇಕಾದ ಭಾವವನ್ನು ತಿಳಿಸುವ ಶರಣರ ಅರಿವಿನ ಮಾತುಗಳನ್ನು ಹೇಳುತ್ತದೆ ಈ ವಚನ. ಆದ್ದರಿಂದ ನೂರಾರು ವರ್ಷಗಳ ಹಿಂದೆ ಹೇಳಿದ್ದರೂ ಎಲ್ಲಕಾಲಕ್ಕೂ ಹೊಂದುವಂತಹ ಮಾತು ಇದು.
“ಅನ್ಯರ ರಜವ ಸೋಂಕದೆ” ಎಂದರೆ ಇನ್ನೊಬ್ಬರ ಧನವನ್ನು, ಪರರ ಸ್ವತ್ತನ್ನು ಮುಟ್ಟದೆ ಎಂದರ್ಥ, “ತನ್ನ ರಜವ ಬಾಧಿಸದೆ” ಎಂದರೆ “ತನ್ನ ಆಸೆಗಳಿಂದ, ವ್ಯಸನಗಳಿಂದ ತನ್ನ ದೇಹ ಹಾಳಾಗದಂತೆ” ನೋಡಿಕೊಳ್ಳುವುದು ಎಂದರ್ಥ. ತಮ್ಮದಲ್ಲದ್ದನ್ನು (ಆಸೆಗೆ ಒಳಗಾಗಿ) ತೆಗೆದುಕೊಳ್ಳುವುದು ಮನಸ್ಸನ್ನು ಕೀಳಾಗಿಸುತ್ತದೆ ಮತ್ತು ದೇಹವನ್ನು ಕೆಡಿಸುತ್ತದೆ. ಅದು ವ್ಯಕ್ತಿಯನ್ನು ಮನಸ್ಸಿನ ದಾಸನನ್ನಾಗಿ ಮಾಡುತ್ತದೆ. ಈ ವಿಷಯದ ಬಗ್ಗೆ ಯೋಚಿಸುವಾಗ ನಾವೆಲ್ಲರೂ “ಅಬ್ಬಾ! ನಾನಂತು ಯಾರ ವಸ್ತುವನ್ನೂ ಮುಟ್ಟುವುದಿಲ್ಲ, ನನ್ನದನ್ನು ಮಾತ್ರ ನಾನು ಉಪಯೋಗಿಸುತ್ತಿದ್ದೇನೆ” ಎಂದುಕೊಂಡು ಸಮಾಧಾನ ಮಾಡಿಕೊಳ್ಳುತ್ತೇವೆ, ಕೆಲವರು ಬೀಗುತ್ತೇವೆ. ಆದರೆ ನಾವೆಲ್ಲರೂ ಸ್ವಲ್ಪ ಸೂಕ್ಷ್ಮವಾಗಿ ಗಮನಿಸ ಬೇಕು. “ಅನ್ಯರ ರಜವ” ಎಂದರೆ ಕೇವಲ ಬೇರೆ “ವ್ಯಕ್ತಿ”ಗೆ ಸೇರಿದುದು ಎಂದರ್ಥವಲ್ಲ. ಅದು ಪ್ರಕೃತಿಯದೂ ಆಗಿರಬಹುದು, ಕಾಡಿನಲ್ಲಿರುವ ಒಂದು ಮರವೋ ಅಥವಾ ಒಂದು ಚಿಕ್ಕ ಸಸಿಯೋ ಆಗಿರಬಹುದು. ಜಗತ್ತಿನಲ್ಲಿಯ ಯಾವುದೇ ವಸ್ತುವಾಗಿರಬಹುದು. ಆದರೂ ಅದನ್ನು ಉಪಯೋಗಿಸುವಾಗ ಅದು ನಮಗೆ ನಿಜವಾಗಿಯೂ ಬೇಕಾಗಿದೆಯೇ? ಎಷ್ಟು ಬೇಕು? ಎಂದೆಲ್ಲ ಯೋಚಿಸಿ ಬಳಸಬೇಕು. ಯಾವ ವಸ್ತುವೂ ಯಾರದ್ದೂ ಅಲ್ಲ. ಆದ್ದರಿಂದ ಪ್ರತಿಯೊಬ್ಬರೂ ತಮಗೆ ಅವಶ್ಯಕವಾದದ್ದನ್ನು ಮಾತ್ರ ತೆಗೆದುಕೊಳ್ಳಬೇಕು. ಅದು “ಲಿಂಗದ ಬೆಳಸು” ಎಂದರೆ ಎಲ್ಲವೂ ದೇವರದ್ದೇ. ಅದನ್ನು ಕಾಯಕದಿಂದ ಸಂಪಾದಿಸಿ ತನಗೆ ಅವಶ್ಯಕವಾದಷ್ಟನ್ನು ಮಾತ್ರ ಇಟ್ಟುಕೊಂಡು ಉಳಿದದ್ದನ್ನು ಜಂಗಮ ಸೇವೆಗಾಗಿ ಬಳಸಬೇಕು. ಯಾವುದೂ ನಮ್ಮ ಸ್ವತ್ತಲ್ಲ, ಯಾವುದರ ಮೇಲೆಯೂ ನಮ್ಮ ಅಧಿಕಾರವಿಲ್ಲ. ಎಲ್ಲವನ್ನೂ ಅ ದೇವರ ಕೃಪೆ ಎಂದು ಅರಿತು ಅದನ್ನು ಮಿತವಾಗಿ ಪ್ರಸಾದದ ಭಾವನೆಯಿಂದ ಬಳಸಬೇಕು. ಅಂತಹವನು ಮಾತ್ರ ನಿಜವಾದ ಲಿಂಗ ಭಕ್ತನು ಎಂದು ಹೇಳುತ್ತಾರೆ ಅಲ್ಲಮಪ್ರಭುಗಳು.
ಪ್ರಕೃತಿಯ ಸಂಪನ್ಮೂಲಗಳನ್ನು ಯಾವ ವಿವೇಚನೆಯೂ ಇಲ್ಲದೆ ಬೇಕಾಬಿಟ್ಟಿಯಾಗಿ ಬಳಸುತ್ತಿರುವ ಮಾನವನಿಗೆ ಇದು ಕಿವಿಮಾತಾಗಬೇಕಲ್ಲವೆ?
ಈಶಾವಾಸ್ಯೋಪನಿಷತ್ತಿನ ಮೊದಲನೆ ಮಂತ್ರ ಇದನ್ನೇ ಹೇಳುತ್ತದೆ:
ಈಶಾವಾಸ್ಯಂ ಇದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್|
ತೇನ ತೆಕ್ತ್ಯೇನ ಭುಂಜಿಥಾ ಮಾ ಗೃಧಃ ಕಸ್ಯಸ್ವಿದ್ಧನಂ||
ಈಶಾವಾಸ್ಯಂ (ಈಶ್ವರನಿಂದ ವ್ಯಾಪ್ತವಾಗಿದೆ) ಇದಂ ಸರ್ವಂ (ಇದೆಲ್ಲವು) ಯತ್ಕಿಂಚ (ಯಾವುದನ್ನೂ ಬಿಡದೆ) ಜಗತ್ಯಾಂ ಜಗತ್ (ಬದಲಾಗುತ್ತಿರುವ ಸಮಸ್ತ ಜಗತ್ತಿನಲ್ಲಿ)|
ತೇನ ತೆಕ್ತ್ಯೇನ (ಅದನ್ನು ತ್ಯಾಗ ಮಾಡಿ, ತ್ಯಾಗದಿಂದ) ಭುಂಜಿಥಾ (ಭೋಗಿಸು) ಮಾ ಗೃಧಃ (ಆಶಿಸದಿರು) ಕಸ್ಯಸ್ವಿದ್ಧನಂ (ಯಾರೊಬ್ಬರ ವಸ್ತುವನ್ನೂ)||
ಈಶನೆಂದರೆ ಒಡೆಯ. ಈ ಬದಲಾಗುತ್ತಿರುವ ಜಗತ್ತು ಒಳಗೂ ಹೊರಗೂ ಅವನಿಂದ ವ್ಯಾಪ್ತವಾಗಿದೆ. (ಎಲ್ಲವೂ ಲಿಂಗದ ಬೆಳಸು) ಇದನ್ನು ಅರಿತು, ಎಲ್ಲವೂ ಈಶ್ವರನ ಪ್ರಸಾದವೆಂದು ಜಗತ್ತಿನ ಸುಖವನ್ನು ಅನುಭವಿಸಬೇಕು. ತ್ಯಾಗದಲ್ಲಿ ಸುಖವಿದೆ. ಪರಿಗ್ರಹದಲ್ಲಿ ಸುಖವಿಲ್ಲವೆಂಬುದನ್ನು ಅರಿಯಬೇಕು. “ನಿನ್ನದೆಂಬುದು ಯಾವುದೂ ಇಲ್ಲ. ಇತರರ ಸ್ವತ್ತಿಗೆ ಆಸೆಪಡಬೇಡ” ವೆಂಬುದು ಈ ಮಂತ್ರದ ಅರ್ಥ.
ಇಲ್ಲಿ ಎರಡನೆ ವಾಕ್ಯದ ಅರ್ಥ ಈ ವಿವರಣೆಯಿಂದ ಸ್ಪಷ್ಟವಾಗಬಹುದು: “ತ್ಯಾಗದಲ್ಲಿ ಸುಖ” ಎಂದರೆ, ನಮಲ್ಲಿ ಇರುವ ಅಥವಾ ನಮಗೆ ಸಿಕ್ಕ ವಸ್ತುವನ್ನು ನಾವು ಇತರರೊಂದಿಗೆ ಹಂಚಿಕೊಂಡಾಗ ನಮಗೆ ಆನಂದವಾಗುತ್ತದೆ. ನಮ್ಮಿಂದ ಪಡೆದವನ ಸಂತೋಷ ನಮ್ಮ ಆನಂದವನ್ನು ಹೆಚ್ಚಿಸುತ್ತದೆ. ಮತ್ತು ನಮ್ಮಲ್ಲಿ ಏನೂ ಉಳಿಯದೆ ಇರುವುದರಿಂದ ಯಾವ ಚಿಂತೆಯೂ ಇರುವುದಿಲ್ಲ. ಇದನ್ನೇ ತ್ಯಾಗದಲ್ಲಿ ಸುಖವಿದೆ ಎನ್ನುವುದು.
ಆದರೆ ನಾವು ವಸ್ತುಗಳನ್ನು ನಮ್ಮಲ್ಲಿ ಇಟ್ಟುಕೊಂಡರೆ, ಅವುಗಳ ರಕ್ಷಣೆಯ ಚಿಂತೆ, ಅವುಗಳನ್ನು ಹೆಚ್ಚಿಸಿಕೊಳ್ಳುವ, ತೋರಿಸಿಕೊಳ್ಳುವ ಆಸೆ, ಅವುಗಳನ್ನು ಯಾವಾಗ ಅನುಭವಿಸಲಿ ಎಂಬುವ ಯೋಚನೆ, ಅವುಗಳ ಬಗ್ಗೆ ಮೋಹ ಮತ್ತು ಅದರಿಂದ ಆಹಂಕಾರ ಇತ್ಯಾದಿಗಳು ಕಾಡುತ್ತ ಅವುಗಳಿಂದ ಸಿಗಬೇಕಾದ ಆನಂದ ಮಾಯವಾಗುತ್ತದೆ.